ಕೊಪ್ಪಳ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ
ಕೊಪ್ಪಳ 24: ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಅಂಗವಾಗಿ ಕೊಪ್ಪಳ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು.
ರಾಷ್ಟ್ರೀಯ ಗಣಿತ ದಿನಾಚರಣೆಯ ಅಂಗವಾಗಿ ಗಣಿತದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರಿ್ಡಸಲಾಗಿತ್ತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಗಣಿತ ಉಪನ್ಯಾಸಕಿ ರಾಧಾರಾಣಿ ಅವರು ಅಂಕಗಣಿತ, ಬೀಜಗಣಿತ, ರೇಖಾಗಣಿತದ ಬಗ್ಗೆ, ಗಣಿತ ವಿಷಯಕ್ಕೆ ಶ್ರೀನಿವಾಸ್ ರಾಮಾನುಜನ್ ಅವರ ಕೊಡುಗೆಗಳ ಬಗ್ಗೆ, ಗಣಿತದಲ್ಲಿ ಭಾರತೀಯರ ಕೊಡುಗೆಗಳ ಬಗ್ಗೆ ವಿಸ್ತಾರವಾಗಿ ಉಪನ್ಯಾಸ ನೀಡಿದರು. ಜೀರೋ ಮತ್ತು ಅನಂತದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಗವಿಸಿದ್ದೇಶ್ವರಸ್ವಾಮಿ ಬೆಣಕಲ್ ಮಠ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಸಿದ್ಧಲಿಂಗೇಶ್ ಹಮ್ಮಿಗಿ, ಡಯಟ್ನ ಉಪನ್ಯಾಸಕ ಶೇಖರ್, ಪ್ರಭಾರಿ ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ಪ್ರಕಾಶ್ ತಗಡಿನಮನಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಯ್ಯದ್ ಮೆಹಬೂಬ್ ಹುಸೇನ್, ಹನುಮರಡ್ಡಿ ಹಳ್ಯಾಳ, ಕನಕಪ್ಪ, ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಶೇಖರ್ ಅಂಕದ್, ಗಣಿತ ವೇದಿಕೆಯ ಕಾರ್ಯದರ್ಶಿ ನಜೀರ್ ಅಹ್ಮದ್, ಗಣಿತ ವೇದಿಕೆಯ ಸಂಚಾಲಕ ಶರಣಬಸನಗೌಡ್ರು, ಕ್ಯೂರೇಟರ್ ಮೈಲಾರ್ಪ, ಸಿಬ್ಬಂದಿಗಳಾದ ಫಕೀರಸಾಬ್, ಮಹಾಲಿಂಗಪ್ಪ, ಶಂಕ್ರ್ಪ, ಪೂಜಾ, ರಾಜಾಭಕ್ಷಿ, ನಬೀಲ್ ಪಾಷ ಸೇರಿದಂತೆ 59 ಕ್ಕೂ ಹೆಚ್ಚಿನ ಗಣಿತ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಿಜ್ಞಾನ ಕೇಂದ್ರದ ಶಿಕ್ಷಣ ಸಹಾಯಕ ಫಕೀರಸಾಬ್ ನಿರೂಪಿಸಿದರು, ಗುಳದಳ್ಳಿಯ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಸುಮಂಗಲಾ ಅವರು ಪ್ರಾರ್ಥಿಸಿದರು, ತಾಂತ್ರಿಕ ಸಹಾಯಕ ಮಹಾಲಿಂಗಪ್ಪ ಸ್ವಾಗತಿಸಿದರು, ತಂತ್ರಜ್ಞ ಶಂಕ್ರ್ಪ ವಂದಿಸಿದರು.