ರಂಗಭೂಮಿ ಕಲೆ ಉಳಿಸಿ ಬೆಳೆಸಿ : ಕೆ.ಎಂ. ಸೈಯದ್‌

Save and nurture the art of theatre: K.M. Syed

ರಂಗಭೂಮಿ ಕಲೆ ಉಳಿಸಿ ಬೆಳೆಸಿ : ಕೆ.ಎಂ. ಸೈಯದ್‌

ಕೊಪ್ಪಳ 02 : ಪ್ರತಿಯೊಬ್ಬರೂ ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸಬೇಕು ಎಂದು ಕೆಪಿಸಿಸಿ ಸಂಯೋಜಕ ಹಾಗೂ ಉದ್ಯಮಿ ಕೆ.ಎಂ.ಸೈಯದ್ ಹೇಳಿದರು. ತಾಲೂಕಿನ ಅಗಳಕೇರಾ  ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ನಿಮಿತ್ತ ಶ್ರೀರಾಮಲಿಂಗೇಶ್ವರ ಸೇವಾ ನಾಟ್ಯ ಸಂಘದಿಂದ ಹಮ್ಮಿಕೊಂಡಿದ್ದ ಹುತ್ತದಲ್ಲಿ ಕೈಯಿಟ್ಟ ಮುತ್ತೈದೆ’ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಟಕಗಳು ಸಾಮಾಜಿಕವಾಗಿ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೀವೆ. ಟಿವಿ, ಮೊಬೈಲ್ ಹಾವಳಿಯಿಂದ ರಂಗಭೂಮಿ ಅಳಿವಿನಂಚಿನಲ್ಲಿದೆ. ಜನರು ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಕೆ.ಸೋಮಶೇಖರ್ ಹಿಟ್ನಾಳ್, ಕೊಪ್ಪಳ ನಗರದ ಖ್ಯಾತ ವೈದ್ಯರಾದ ಡಾ.ಮಹೇಶ್ ಗೋವನ್ ಕೊಪ್ಪ, ಅಗಳಕೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ಅಧ್ಯಕ್ಷ ಕೆಂಚಪ್ಪ ಹಿಟ್ನಾಳ್ ಉಪಾಧ್ಯಕ್ಷ ವಲಿಸಾಬ್ ಪೊಲೀಸ್ ಪಾಟೀಲ್, ಅಗಳಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನಕ ರಾಜ್ ಬುಳ್ಳಾಪುರ, ಗ್ರಾಮ ಪಂಚಾಯಿತಿಯ  ಸದಸ್ಯರು, ಗ್ರಾಮದ ಹಿರಿಯರಾದ ಹುಲಗಪ್ಪ ಗಡಾದ್, ಬಸವರಾಜ್ ಕರ್ಕಿಹಳ್ಳಿ, ಪರಸಪ್ಪ ಗಮಣಿ, ಕೃಷ್ಣ ಗಡಾದ್, ಮಂಜುನಾಥ್ ಶೆಟ್ಟರ್, ಖಾಜಾ ಯಾದಗಿರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.