ಯುವಕರು ಕೆಟ್ಟ ಹವ್ಯಾಸಗಳನ್ನು ಬಿಟ್ಟು ದೇಶ ಕಟ್ಟುವ ಕೆಲಸ ಮಾಡಬೇಕು
ಕೊಪ್ಪಳ 13: ಯುವ ಜನತೆ ದೇಶದ ಸಂಪತ್ತಾಗಬೇಕು ನಮ್ಮ ಭಾರತ ದೇಶದ ನವ ನಿರ್ಮಾಣ ಕಾರ್ಯದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಯುವ ವಿಭಾಗದ ಅಡಿಯಲ್ಲಿ ಏರಿ್ಡಸಿದ "ಯುವ ದಿನಾಚರಣೆ" ಕಾರ್ಯಕ್ರಮದಲಿ ್ಲಯುವಕ ಯುವತಿಯರನ್ನು ಸನ್ಮಾನಿಸಿ ಮಾತನಾಡಿದರು.
ಪರಿಶ್ರಮವಿಲ್ಲದೆ ಪ್ರತಿಫಲ ಸಿಗದು. ನಿರಂತರ ಅವಿಶ್ರಾಂತ ಪರಿಶ್ರಮದಿಂದ ಜೀವನದಲ್ಲಿ ಸಫಲತೆ ಪಡೆಯಲು ಸಾಧ್ಯ ಯುವಜನತೆ ತನ್ನ ತನು, ಮನ ಶಕ್ತಿಯನ್ನು ಸೃಜನಾತ್ಮಕ ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸಬೇಕು. ಜೀವನ ಉನ್ನತಿಯ ಕಡೆ ಸಾಗಬೇಕಾದರೆ ಆಧ್ಯಾತ್ಮ ಜ್ಞಾನದ ತಳಹದಿಯ ಮೇಲೆ ತನ್ನ ಜೀವನ ರೂಪಿ ಕಟ್ಟಡವನ್ನು ಕಟ್ಟಿಕೊಳ್ಳಬೇಕು ಆಧ್ಯಾತ ್ಮಜ್ಞಾನವಿಲ್ಲದ ಜೀವನ ಮರಳಿನ ಮೇಲೆ ಕಟ್ಟಡ ಕಟ್ಟಿದಂತೆ. ಯುವ ಜನತೆ ಜೀವನರೂಪಿ ಪರೀಕ್ಷೆಯಲ್ಲಿ ಪಾಸಾಗಲು ಧೈರ್ಯ, ತಾಳ್ಮೆ, ಛಲ, ದೃಢತೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಗೆ, ಕೆಟ್ಟ ಸಂಗ, ಕೆಟ್ಟ ಹವ್ಯಾಸಗಳಿಗೆ ವಶ ಆಗದಂತೆ ಇರಲು ಮನೊ ನಿಯಂತ್ರಣ ಶಕ್ತಿ ಬೇಕು. ಇದನ್ನು ರಾಜಯೋಗಧ್ಯಾನದಿಂದ ಮನಸ್ಸಿನ ಮೇಲೆ ಮಾಲೀಕರಾಗಿ ಮನಜೀತ್ಜಗತ್ಜಿತ್ ಆಗಬೇಕು. ಇಂದಿನ ಯುವಜನತೆ ಮೊಬೈಲ್ ಹಾವಳಿಯಿಂದ ತಮ್ಮನ್ನು ತಾವೇ ರಕ್ಷಿಸಿಕೊಂಡು ಮರ್ಯಾದೆ ಮತ್ತು ಚಾರಿತ್ರ್ಯದ ಚೌಕಟ್ಟಿನಲ್ಲಿ ಬೆಳೆಯಬೇಕು. ಹೆತ್ತ ತಂದೆ ತಾಯಿಗೂ ಸಮಾಜಕ್ಕೂ ಆಸ್ತಿಯಾಗಬೇಕು ಎಂದರು.
ಹಿಂದೂ ಮಹಾ ಮಂಡಳಿ ಕಾಮನಕಟ್ಟಿ ಗೆಳೆಯರ ಬಳಗ ಕಿನ್ನಾಳ ಗ್ರಾಮದ ಯುವಕರು ರಸ್ತೆ ಕಾಮಗಾರಿಯಲ್ಲಿ ತಮ್ಮ ಯುವಶಕ್ತಿಯನ್ನು ಬಳಸಿಕೊಂಡಿದ್ದನ್ನು ಗುರುತಿಸಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಅವರನ್ನು ಗೌರವಿಸಲಾಯಿತು ಜೊತೆಗೆ ಅನೇಕ ಯುವಕರು ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. "ಯುವ ಜನತೆಯ ಜೀವನದ ಸಫಲತೆಯಲ್ಲಿ ಆಧ್ಯಾತ್ಮ " ವಿಷಯದ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಲಾಯಿತು. ಬಿಕೆ ಸ್ನೇಹಕ್ಕಕಾರ್ಯಕ್ರಮ ನಿರೂಪಿಸಿದರು.