ಇಬ್ರಾಹಿಂ ಬಿಸನಳ್ಳಿ ವತಿಯಿಂದ ಸಂಸದ ಮತ್ತು ಶಾಸಕರಿಗೆ ಸನ್ಮಾನ
ಕೊಪ್ಪಳ 07: ಇಲ್ಲಿಗೆ ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ನಾಮಕರಣ ಸದಸ್ಯರಾಗಿ ಸರ್ಕಾರದಿಂದ ನೇಮಕಗೊಂಡ ನ್ಯಾಯವಾದಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಇಬ್ರಾಹಿಂ ಬಿಸ ನಳ್ಳಿ ರವರು ತಮ್ಮ ನೇಮಕಕ್ಕೆ ಶಿಫಾರಸ್ಸು ಮಾಡಿದ ಕೊಪ್ಪಳ ಸಂಸದರಾದ ಕೆ ರಾಜಶೇಖರ ಹಿಟ್ನಾಳ ಮತ್ತು ಕೊಪ್ಪಳ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ರವರನ್ನು ಭೇಟಿ ಮಾಡಿ ಸನ್ಮಾನಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಬಿಸನಳ್ಳಿ ರವರ ಅಭಿಮಾನಿ ಬಳಗ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡು ಇಬ್ರಾಹಿಂ ಬಿಸನಳ್ಳಿ ರವರ ನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದರು.