ಭಿಕ್ಷಾಟನೆ ಮುಕ್ತ ಜಾತ್ರೆಗಾಗಿ ಅನೀರೀಕ್ಷಿತ ದಾಳಿ

Unexpected attack for begging free fair

ಭಿಕ್ಷಾಟನೆ ಮುಕ್ತ ಜಾತ್ರೆಗಾಗಿ ಅನೀರೀಕ್ಷಿತ ದಾಳಿ 

ಕೊಪ್ಪಳ 15: ಶ್ರೀ ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ಪಂದನಾ, ಮಹಿಳಾ ಧ್ವನಿ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ಕೊಪ್ಪಳ ಹಾಗೂ ಭಿಕ್ಷುಕರ ಪುನರವಸತಿ ಕೇಂದ್ರ, ಬಳ್ಳಾರಿರವರ ಸಂಯುಕ್ತಾಶ್ರಯದಲ್ಲಿ “ಭಿಕ್ಷಾಟನೆ ಮುಕ್ತ ಶ್ರೀಗವಿಸಿದ್ದೇಶ್ವರ ಜಾತ್ರೆ”ಯನ್ನಾಗಿಸಲು ಭಿಕ್ಷುಕರ ಪತ್ತೆ ಮತ್ತು ಪುನರವಸತಿಗಾಗಿ ಬುಧವಾರದಂದು ಅನೀರೀಕ್ಷಿತ ದಾಳಿಯನ್ನು ಆಯೋಜಿಸಲಾಯಿತು.  

ಈ ಚಟುವಟಿಕೆಗೆ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಲಾದ ಮಹಾಂತೇಶ ದರಗದ ಅವರು ವಾಹನಕ್ಕೆ ಹಸಿರು ನಿಶಾನೆಯನ್ನು ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.  

ನಂತರ ನಡೆಸಿದ ಅನೀರೀಕ್ಷಿತ ದಾಳಿಯಲ್ಲಿ 12 ಜನ ಭಿಕ್ಷುಕರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಯಿತು. ಈ ದಾಳಿಯಲ್ಲಿ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಮಹಿಳಾ ಧ್ವನಿ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಪ್ರೀಯದರ್ಶಿನಿ ಮುಂಡರಗಿ ಮಠ, ಸ್ಪಂದನಾ ಸಂಸ್ಥೆಯ ಸಂಯೋಜಕ ಶಂಕರ ಸುರಳ, ಬಳ್ಳಾರಿಯ ಭಿಕ್ಷಕುರ ಪುನರವಸತಿ ಕೇಂದ್ರದ ಅಧೀಕ್ಷಕ ಕೆ.ಪಿ. ಚಿನಪಾಲಯ್ಯ, ವಾರ್ಡರ ಜೆ.ಮಣಿಕಂಠ ಸೇರಿದಂತೆ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098 ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂಧಿಗಳು ಭಾಗವಹಿಸಿದ್ದರು. 

ಬುಧವಾರ ಮಧ್ಯಾಹ್ನದವರೆಗೆ ಕಾರ್ಯಾಚರಣೆಯಲ್ಲಿ 12 ಜನರನ್ನು  ಪತ್ತೆ ಹಚ್ಚಿ ವಶಕ್ಕೆ ಪಡೆದು, ಅವರಿಗೆ ಪುನರವಸತಿಯನ್ನು ಕಲ್ಪಿಸಲಾಗುತ್ತದೆ. ಭಿಕ್ಷಾಟನೆ ಮಾಡುವುದು ಹಾಗೂ ಭಿಕ್ಷಾಟನೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿ/ ಮಗುವಿಗೆ ಭಿಕ್ಷೆಯ ರೂಪದಲ್ಲಿ ಹಣ ಅಥವಾ ವಸ್ತಗಳನ್ನು ನೀಡದಂತೆ ಹಾಗೂ ಭಿಕ್ಷಾಟನೆ ನಿರ್ಮೂಲನೆಯಲ್ಲಿ ಕೊಪ್ಪಳ ಜಿಲ್ಲಾಡಳಿತದೊಂದಿಗ ಕೈ ಜೋಡಿಸುವಂತೆ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತಿಳಿಸಿದೆ.