ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಕೊಪ್ಪಳ : ಇಲ್ಲಿನ ಸವಿತಾ ಸಮಾಜ ವಿವಿದೋದ್ದೇಶ ಸಹಾಕರ ಸಂಘ ನಿಯಮಿತಕ್ಕೆ ಇಂದು ಜರುಗಿದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು 2024 ರಿಂದ 2029 ವರೆಗಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನಾಗರಾಜ ಕಂಪ್ಲಿ ಹಾಗೂ ಉಪಾಧ್ಯಕ್ಷರಾಗಿ ಶಿವಮೂರ್ತಿ ಚಿಕ್ಕಮಾದಿನಾಳ ಇವರನ್ನು ಚುನಾವಣಾಧಿಕಾರಿಗಳು ಆಯ್ಕೆಗೊಳಿಸಿ ಘೋಷಿಸಿದ್ದಾರೆ.
ಇನ್ನುಳಿದಂತೆ ಕಾರ್ಯಕಾರಿ ನಿರ್ದೇಶಕ ಮಂಡಳಿಗೆ ದೇವಪ್ಪ ಕರ್ಕಿಹಳ್ಳಿ, ವಿಠ್ಠಲ ಗೌರಿಅಂಗಳ, ತುಕಾರಾಂ ಸವಿತಾ, ಮಾರುತಿ ಸೂಗೂರು, ಬಡಪ್ಪ ಮಲ್ಕಾಪುರ, ರಾಘವೇಂದ್ರ ಸವಿತಾ, ಮಹಿಳಾ ನಿರ್ದೇಶಕರಾಗಿ ಶ್ರೀಮತಿ ಅಯ್ಯಮ್ಮ ಸವಿತಾ ಹಾಗೂ ಶ್ರೀಮತಿ ರಂಗಮ್ಮ ಸವಿತಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಜಿಲ್ಲಾ ಉಪನಿಬಂಧಕರ ಕಛೇರಿಯ ಪ್ರಥಮ ದರ್ಜೆಯ ಸಹಾಯಕರೂ ಹಾಗೂ ಸವಿತಾ ಸಮಾಜ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತದ ಚುನಾವಣಾಧಿಕಾರಿಯಾಗಿ ನಿರ್ಮಲಾ ಬ ಗದಗೇರಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ದೇವಪ್ಪ ಗೌರಿಅಂಗಳ, ರವಿಕುಮಾರ ಸೂಗೂರು, ಕಲ್ಲಪ್ಪ ಹೊನ್ನುಂಚಿ, ಈಶಪ್ಪ ಚಿಕ್ಕಮಾದಿನಾಳ, ಕಾರ್ಯದರ್ಶಿ ಯಲ್ಲಪ್ಪ ಸವಿತಾ, ಪಿಗ್ಮಿ ಏಜೆಂಟ್ ನಾಗರಾಜ ಸವಿತಾ, ಸಣ್ಣ ಯಲ್ಲಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.