ವಣ್ಣೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ದೇಸಾಯಿ, ಉಪಾಧ್ಯಕ್ಷರಾಗಿ ಬಶೆಟ್ಟಿ ಆಯ್ಕೆ
ನೇಸರಗಿ 04: ಸಮೀಪದ ವಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಾಳಾಸಾಹೇಬ ರು. ದೇಸಾಯಿ ಮತ್ತು ಉಪಾಧ್ಯಕ್ಷರಾಗಿ ನಾಗಪ್ಪ ಬಸಲಿಂಗಪ್ಪ. ಬಶೆಟ್ಟಿ ಅವರು ಆಯ್ಕೆಯಾದರು.
ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಈ ಭಾಗದ ರೈತರ ಅಭಿವೃದ್ಧಿಗೆ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಉತ್ತಮ ಕಾರ್ಯ ಮಾಡಿದ್ದು ಅದಕ್ಕೆ ಅವರ ಬೆಂಬಲಿತರನ್ನು ಅಮೋಘವಾಗಿ ರೈತರು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ ಎಂದರು.
ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಮಾತನಾಡಿ ವಣ್ಣೂರ, ಸುನಕುಂಪಿ, ಮಾಸ್ತಮರ್ಡಿ ಗ್ರಾಮಗಳ ರೈತರ ಬೆಳವಣಿಗೆ ಸೇವೆ ಸಲ್ಲಿಸಲು ಸದಾ ಬದ್ಧನಾಗಿದ್ದೇನೆ ಎಂದರು.
ರವಿರಾಜ ಇನಾಮದಾರ, ಕುಮಾರಗೌಡ ಪಾಟೀಲ, ಮಂಡಳ ಬಿಜೆಪಿ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಬೈಲಹೊಂಗಲ ತಾಲೂಕ ಬಿಡಿಸಿಸಿ ಬ್ಯಾಂಕ ಸಂಯೋಜಕ ವೀರುಪಾಕ್ಷ ಗೀರಣವರ, ಸುರೇಶ ಮತ್ತಿಕೊಪ್ಪ, ಹಿರಿಯರಾದ ಬಸಲಿಂಗಪ್ಪ ಬಶೆಟ್ಟಿ,ವೀರಣ್ಣ ದೇಸಾಯಿ, ಆನಂದ ಕಿರಗಿ, ಹಣಮಂತ ದೊಡ್ಡನವರ, ಭೀಮಪ್ಪ ಸೋಮನಟ್ಟಿ, ನಾಗಪ್ಪ ಮುತ್ತೆನವರ, ಲಕ್ಕಪ್ಪ ಹಳಬನವರ, ಸಿದ್ದಪ್ಪ ಅಂಗಡಿ, ಸಿದ್ದಪ್ಪ ಹಣ್ಣಿಕೇರಿ, ಮಲ್ಲೇಶ ಚಿಕ್ಕೋಡಿ, ಬಾಳಪ್ಪ ದಳವಾಯಿ,ಯಲ್ಲಪ್ಪ ಚಿಕ್ಕೊಪ್ಪ, ನಾಗಪ್ಪ ಶೆಬನ್ನವರ, ನಿಂಗಪ್ಪ ಹೊಸಮನಿ, ರಾಮಪ್ಪ ಕೊಳವಿ, ಶಿವಲಿಂಗ ಹೋಳಿ, ಬಸವರಾಜ ಅಂಗಡಿ, ಡಿ.ಎಂ.ಶೆಬನ್ನವರ, ಸೋಮಪ್ಪ ಬಶೆಟ್ಟಿ, ನಿಂಗಪ್ಪ ಕೇರಿ, ಮಲ್ಲೇಶ ಹಳ್ಳೂರಿ, ಚಂಬಣ್ಣ ಗುತ್ತಿಗೋಳಿ, ಬಾಬು ಶೆಬನ್ನವರ, ವಜ್ರಕಾಂತ ಕುಲಕರ್ಣಿ, ವೀರ್ಪ ಕೊಳವಿ, ಚುನಾವಣಾಧಿಕಾರಿ ರಾಘವೇಂದ್ರ ಪಾಟೀಲ, ಕಾರ್ಯದರ್ಶಿ ರಮೇಶ ಹೊಸಮನಿ, ಕ್ಲಾರ್ಕ ಶಂಕರ ದನದ, ವಣ್ಣೂರ, ಮಾಸ್ತಮರ್ಡಿ, ಸುನಕುಂಪಿ ಗ್ರಾಮಸ್ಥರು ಭಾಗವಹಿಸಿದ್ದರು.