ಮುಂಡಗೋಡ 02: ತಾಲೂಕಿನ ಹಲವು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರು, ವರದಿಗಾರರನ್ನು ಆಹ್ವಾನಿಸಿ, ಸನ್ಮಾನ ಮಾಡುವ ಜೊತೆಗೆ ಪತ್ರಕರ್ತರ ಬಗ್ಗೆ ಅವರ ಜೀವನದ ಬಗ್ಗೆ ವಿಚಾರ ಅವಲೋಕನ ಮಾಡಲಾಯಿತು.
ಪತ್ರಿಕೆ ಎನ್ನುವುದು ಸಮಾಜದಲ್ಲಿ ನಾಗರೀಕರಿಗೆ ಮತ್ತು ಸರ್ಕಾರಕ್ಕೆ ನಡುವೆ ಇರುವ ಸೇತುವೆ, ಅದನ್ನು ಸಶಕ್ತವಾಗಿ ಉಪಯೋಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು " ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ" ಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕೀರ್ಣದಲ್ಲಿ ಪತ್ರಕರ್ತರ ಜೀವನದ ಶೈಲಿ,
ಪತ್ರಕರ್ತರ ಸವಾಲುಗಳು, ಪತ್ರಿಕಾ ಕಛೇರಿಗಳಲ್ಲಿ ಜರುಗುವ ಘಟನೆಗಳು, ಪತ್ರಿಕಾ ರಂಗದಲ್ಲಿ ಇರುವ ಉದ್ಯೋಗಾವಕಾಶ, ಪತ್ರಿಕಾ ಸ್ವಾತಂತ್ರ್ಯದಲ್ಲಿ ಸದ್ಯದ ದೇಶದ ಸ್ಥಾನಮಾನ, ಪರಿಸರ ಕಾಳಜಿಯ ಪತ್ರಿಕೋದ್ಯಮದ ಮಾನವೀಯ ಮುಖ, ಪತ್ರಿಕಾ ರಂಗದಲ್ಲಿ ಎಐನ ಪಾತ್ರ ಎಲ್ಲವನ್ನೂ ಕೂಡ ಪ್ರಾಚಾರ್ಯರು, ಅಧ್ಯಾಪಕರು ಹಾಗೆಯೇ ಪತ್ರಕರ್ತರು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಸಿಂಗ್ ಹಜೇರಿ ಪತ್ರಕರ್ತರಾದ ಶಿವರಾಜ್ ಶಿರಾಲಿ, ಸಂತೋಷ್ ದೈವಜ್ಞ, ಗಜೇಂದ್ರ, ಮಂಜು ರೂಪಕಲಾ ಮನೋಹರ್ ಲಮಾಣಿ ಹಾಗೂ ಮಾಧ್ಯಮ ವರದಿಗಾರರಾದ ಎ ಬಿ ನಿಖಿಲ್ ಭಾಗವಹಿಸಿದ್ದರು.