ಮಹಾಲಿಂಗಪುರ 29: ಪೌರ ಕಾರ್ಮಿಕರ ಮುಷ್ಕರ ಸಾರ್ವಜನಿಕರ ಮೇಲೆ ಬಹಳ ಪರಿಣಾಮ ಬೀರುತ್ತದೆ.ಯಾವುದೇ ಸಾರ್ವಜನಿಕ ವಲಯಗಳಲ್ಲಿ ಕಾರ್ಯಗಳು ನಡೆಯದಿದ್ದರೆ ಅವ್ಯವಸ್ಥೆ ಉಂಟು ಎಂಬುದು ಸರ್ಕಾರ ತಿಳಿದು ಪೌರಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.
ನಂತರ ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ ಪೌರಕಾರ್ಮಿಕರಿಗೆ ಅನೇಕ ಸಮಸ್ಯೆಗಳಿವೆ ಇದನ್ನು ಅರಿತು ಸರಕಾರ ಅವರ ಬೇಡಿಕೆಗಳನ್ನು ಆದಷ್ಟು ಬೇಗ ಕಾರ್ಯರೂಪದಲ್ಲಿ ತರಲಿ ಜೊತೆಗೆ ನಮ್ಮ ಬೆಂಬಲ ಪೌರಕಾರ್ಮಿಕರ ಮೇಲಿದೆ ಎಂದರು.
ನಗರ ಘಟಕ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ ನಗರದ ಸ್ವಚ್ಛತೆಗೆ ಮತ್ತು ವಿವಿಧ ಸಾರ್ವಜನಿಕ ವಲಯ ಕಾರ್ಯಗಳಿಗೆ ಪೌರಕಾರ್ಮಿಕರ ಪಾತ್ರ ಪ್ರಮುಖವಾದದು. ಈ ಮುಷ್ಕರ ಸಾರ್ವಜನಿಕ ವಲಯಕ್ಕೆ ಪರಿಣಾಮ ಉಂಟು ಮಾಡುತ್ತದೆ ಎಂದರು.
ಮಾಜಿ ಪುರಸಭೆ ಅಧ್ಯಕ್ಷ ಜಿ ಎಸ್ ಗೊಂಬಿ ಮಾತನಾಡಿ ಪೌರಕಾರ್ಮಿಕರಿಲ್ಲದೆ ನಾವೇನು ಮಾಡಲು ಸಾಧ್ಯವಿಲ್ಲ. ಒಂದಿಷ್ಟು ಪೌರಕಾರ್ಮಿಕರು ತಮ್ಮ ಪ್ರಾಣವನ್ನು ಬದಿಗಿಟ್ಟು ಕೆಲಸವನ್ನು ಮಾಡಿದ್ದನ್ನು ನಾವು ನಿರಂತರ ನೋಡುತ್ತಿರುತ್ತೇವೆ. ಆದಕಾರಣ ಸರಕಾರದಿಂದ ಮನ್ನಣೆ ಸಿಗಲಿ ಎಂದರು.
ಪೌರ ಕಾರ್ಮಿಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ ಹಲಸಪ್ಪಗೊಳ್ ಮಾತನಾಡಿ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಮುಷ್ಕರ ನಿರಂತರವಾಗಿದೆ ಎಂದರು.
ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ,ಪುರಸಭೆ ಸದಸ್ಯ ಚನ್ನಬಸು ಯರಗಟ್ಟಿ, ಬಿಜೆಪಿ ಮುಖಂಡರಾದ ಮಹಾಲಿಂಗಪ್ಪ ಕುಳ್ಳೊಳ್ಳಿ, ಅಶೋಕ ದಿನ್ನಿಮನಿ, ಶಿವಬಸು ಗೌಂಡಿ, ಭೀಮಶಿ ಗೌಂಡಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಕಂಠಿ, ವೀರಭದ್ರ ಮುಗಲ್ಯಾಳ, ಮಹೇಶ ಜಿಡ್ಡಿಮನಿ, ಬಸು ಹುಕ್ಕೇರಿ, ಹರೀಶ ನಾಯಕ, ಅರ್ಜುನ ಮೋಪಗಾರ, ತಿಪ್ಪಣ್ಣ ಬಂಡಿವಡ್ಡರ, ಮಹಾಲಿಂಗಪ್ಪ ನರಗಟ್ಟಿ, ಪ್ರಶಾಂತ ಮುಕ್ಕೆನ್ನವರ, ಸೋಮು ಶಿರೋಳ, ಆನಂದ ಪವಾರ,ಮಹಾಂತೇಶ ಪಾತ್ರೋಟ, ಸಂಜಯ ರಾಠೋಡ, ಶೇಖರ ಮಗದುಮ,ಮಹಾಲಿಂಗಪ್ಪ ಬುದ್ನಿ, ಅಜಯ ಹಂದ್ರಾಳ, ರವಿ ಗಿರಿಸಾಗರ, ಕುಮಾರ ನಾರಾಯನಕರ, ಸ್ಥಳೀಯ ಶಾಖಾ ಅಧ್ಯಕ್ಷ ಎಂ ಕೆ ದಳವಾಯಿ, ಉಪಾಧ್ಯಕ್ಷ ರಾಮು ಮಾಂಗ, ಪುರಸಭೆ ವ್ಯವಸ್ಥಾಪಕ ಎಸ್ ಎನ್ ಪಾಟೀಲ್, ಸಂಘಟನಾಧಿಕಾರಿ ಸಿ ಎಸ್ ಮಠಪತಿ, ಎಸ್ ಜಿ ಕತ್ತಿ, ಎಂ ಎಸ್ ಮುಲ್ಲಾ, ಶಿವಾನಂದ್ ಚೌಧರಿ, ಈರಣ್ಣ ಕೊಪ್ಪದ, ಕಾಂತು ಹಡಪದ, ಚಂದ್ರು ಚಿತ್ತರಗಿ, ಪ್ರಕಾಶ್ ಕಟಾವಿ, ಮಹಾಲಿಂಗ ಸೇರಿದಂತೆ ಅನೇಕ ಮಹಿಳಾ ಪೌರಕಾರ್ಮಿಕರು ಜೊತೆಗೆ ಮುಖಂಡರು ಈ ಹೋರಾಟದಲ್ಲಿ ಭಾಗವಹಿಸಿದ್ದರು.