ಬೆಳಗಾವಿ 08: ಸಂಘಟಕರು ನಮ್ಮ ಬಳಿ ಬಂದು ಪರಿಸರ ರಕ್ಷಣೆ ಮಾಡುವ ಕುರಿತು ರ್ಯಾಲಿ ಆಯೋಜಿಸಲಾಗಿದೆ. ಎಲ್ಲ ಸಮಾಜದ ಸ್ವಾಮೀಜಿ ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ನೀವು ಬಂದು ಭಾಗವಹಿಸಬೇಕು ಎಂದಾಗ ಪರಿಸರ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಒಂದು ಕ್ಷಣವೂ ಯೋಚಿಸದೆ ರ್ಯಾಲಿಯ್ಲಿ ಭಾಗಿಯಾಗಿದ್ದೆ.
ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾದಾಗ ಗೊತ್ತಾಯಿತು ಆ ರ್ಯಾಲಿ ಮಹದಾಯಿ ಹೋರಾಟದ ವಿರೋಧವಾಗಿತ್ತು ಎಂದು.ನಾಡು, ನುಡಿ, ಜಲದ ವಿಚಾರವಾಗಿ ಹೋರಾಟ ಮಾಡಿಕೊಂಡ ಬಂದ ನಾನು ಮಹದಾಯಿ ಹೋರಾಟದ ಪರವಾಗಿರುವ ನಾವು ಆ ವಿಷಯ ತಿಳಿದ ತಕ್ಷಣವೇ ಅಲ್ಲಿಂದ ಹೊರಟುಬಂದೆವು, ಸಂಘಟಕರು ನಮಗೆ ದಿಕ್ಕು ತಪ್ಪಿಸುವಂತೆ ಮಾಡಿದ್ದರು. ಪೂವಾ9ಪರ ವಿಚಾರಿಸದೆ ನಾವು ಅಲ್ಲಿಗೆ ಹೋಗಬಾರದಿತ್ತು, ಆ ವಿಷಯದ ಬಗ್ಗೆ ನಮಗೆ ಅಸಮಾಧಾನವಿದೆ. ಅದಕ್ಕೆ ವಿಷಾದಿಸುತ್ತೇವೆ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು. ಹಿರೇಮಠ, ಹುಕ್ಕೇರಿ.