ಧಾರವಾಡ 29: ಶಾಲಾ ಶಿಕ್ಷಣ ಇಲಾಖೆಯ ಸರಕಾರಿ ಶಾಲೆಗಳು ರಜಾ ದಿನಗಳ ನಂತರ ಇಂದಿನಿಂದ ತೆರೆದಿದ್ದು, ಧಾರವಾಡ ತಾಲೂಕಿನ ಗುಳೆದಕೋಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಚತಾ ಕಾರ್ಯವನ್ನು ಬಿಇಓ ರಾಮಕೃಷ್ಣ ಸದಲಗಿ ಅವರು ಪರೀಶೀಲಿಸಿದರು.
ನಂತರ ಅವರು ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಪ್ರಾರಂಭೋತ್ಸವದ ಸಿದ್ಧತೆ ಬಗ್ಗೆ ಶಾಲಾ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡರು.