ಹೂವಿನ ಹಡಗಲಿ 28: ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಪುರಸಭೆ ನೌಕರರು ಕರ್ತವ್ಯ ಬಹಿಷ್ಕರಿಸಿ ಪುರಸಭೆ ಕಚೇರಿ ಎದುರು ಬುಧವಾರ ಮುಷ್ಕರ ನಡೆಸಿದರು. ಸರಕಾರಿ ನೌಕರರೆಂದು ಪರಿಗಣಿಸಬೇಕು, ನೌಕರರಿಗೆ ನೀಡುವ ಎಲ್ಲ ಸೌಲಭ್ಯ ಒದಗಿಸಬೇಕು.
ನೀರಗಂಟಿ, ಲೋಡರ್ಸ, ಪೌರಕಾರ್ಮಿಕರು, ಸ್ವಚ್ಛತೆಗಾರರು, ಕಿರಿಯಕಾರ್ಯ ನಿರ್ವಾಹಕರು, ಕಂಪ್ಯೂಟರ್ ಆಪರೇಟರ್, ಸೂಪರ್ ವೈಸರ್ಗಳು ಸೇರಿದಂತೆ ಇತರ ಹೊರಗುತ್ತಿಗೆ ಸಿಬ್ಬಂದಿ ಸಂಬಳವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಬೇಕು. ಕಳೆದ 2022-23ನೇ ಸಾಲಿನಲ್ಲಿ ನೇಮಕವಾಗಿರುವ ಪೌರಕಾರ್ಮಿಕರಿಗೆ ಎಸ್.ಎಫ್ಸಿ ಅನುದಾನದಲ್ಲೇ ಸಂಬಳ ಪಾವತಿಸುವುದು ಸೇರಿದಂತೆಇತರ ಬೇಡಿಕೆಗಳನ್ನು ಸರಕಾರಕೂಡಲೇಈಡೇರಿಸಬೇಕುಎಂದು ಒತ್ತಾಯಿಸಿದರು. ಪುರಸಭೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿರುವ ಪ್ರತಿಭಟನೆಗೆ ಹಡಗಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮುಷ್ಕರದಲ್ಲಿ ಸರ್ಕಾರಿ ನೌಕರರ ಸಂಘದಅಧ್ಯಕ್ಷಅಯ್ಯನಗೌಡ್ರಕೊಟ್ರುಗೌಡ. ಪುರಸಭೆ ನೌಕರರ ಸಂಘದಅಧ್ಯಕ್ಷಎಚ್.ಯಮುನಪ್ಪ, ಉಪಾಧ್ಯಕ್ಷಗಂಗಯ್ಯ, ಕಾರ್ಯದರ್ಶಿ ಟಿ.ರಾಮಮೂರ್ತಿ, ಸಂಘಟನಾ ಕಾರ್ಯದರ್ಶಿ ಮೈಲಾರ್ಪ, ಖಜಾಂಚಿಗವಿಯಪ್ಪ, ರಾಜ್ಯ ಪರಿಷತ್ ಸದಸ್ಯ ಸಂತೋಷ್, ಮಾರುತಿ, ಕೋಟೆಪ್ಪಎಸ್. ಬಸವರಾಜಪ್ಪ ಸಿ.ಪ್ರಕಾಶ, ಟಿ.ವಿಜಯ ಇತರರಿದ್ದರು.