ಸಂಬರಗಿ 29: ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬಗಳು ವಾಸಿಸಲು ಜೋಪಡಿಯಲ್ಲಿದ್ದಾರೆ. ಪ್ರತಿ ಜೋಪಡಿಯಲ್ಲಿರುವ ಬಡ ಕುಟುಂಬಕ್ಕೆ ವಾಸಿಸಲು ನಿವೇಶನಗಳನ್ನು ನೀಡಲಾಗಿದ್ದು, ಕೇಂದ್ರ ಸರ್ಕಾರ ಗುಡಿಸಲು ಮುಕ್ತ ಮಾಡುವ ಗುರಿ ಹೊಂದಿದೆ. ಆ ಪ್ರಕಾರ ನಮ್ಮ ಗ್ರಾಮಕ್ಕೆ 78 ಮನೆಗಳು ಮಂಜೂರಾತಿ ಆಗಿದ್ದು, ಮಾಜಿ ಸಂಸದ ಅಣ್ಣಾಸಾಬ ಜೊಲ್ಲೆ ಇವರ ಸಹಕಾರದಿಂದ ಆಗಿದೆ. ರಾಜ್ಯದಲ್ಲಿ ವಿರೋಧ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಆದರೆ ಅಭಿವೃದ್ಧಿ ಕೆಲಸದಲ್ಲಿ ಸ್ಥಳಿಯ ಶಾಸಕ ದ್ವಿಯರು ಯಾವುದೇ ಪಕ್ಷಪಾತ ಮಾಡಿಲ್ಲ ಎಂದು ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾದೇವ ಕೋರೆ ಹೇಳಿದರು.
ಮದಭಾವಿ ಗ್ರಾಮದ ಸಭಾ ಭವನದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಮನೆಗಳ ಆದೇಶ ಪತ್ರ ವಿತರಿಸಿ ಮಾತನಾಡಿ ಅವರು ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಬಡ ಕುಟುಂಬ ವಾಸಿಸುವ ಸ್ಥಳಗಳನ್ನು ಪರೀಶೀಲನೆ ಮಾಡಿ ಅವರಿಗೆ ಮನೆ ಕಟ್ಟಡ ಮಾಡಲು ಆದೇಶ ಪತ್ರವನ್ನು ನೀಡಿದ್ದಾರೆ. ಫಲಾನುಭವಿಗಳು ಮನೆ ಕಟ್ಟಡ ಮಾಡಿ ಗುಡಿಸಲು ಮುಕ್ತವಾಗಬೇಕೆಂದು ಅವರು ಹೇಳಿದರು.
ಗಡಿ ಭಾಗದಲ್ಲಿ ಬರಗಾಲವಿದ್ದು, ಶಾಸಕ ಲಕ್ಷ್ಮಣ ಸವದಿ, ಶಾಸಕ ರಾಜು ಕಾಗೆ ಇವರ ಸತತ ಪ್ರಯತ್ನದಿಂದ ನೆನಗುದ್ದಿಗೆ ಬಿದ್ದಿದ್ದ ನೀರಾವರಿ ಕಾಮಗಾರಿಗಳು ಪ್ರಗತಿ ಪಥದಲ್ಲಿದ್ದು, ಬರಗಾಲ ಮುಕ್ತ ಮಾಡಲು ಅವರು ಸತತ ಪ್ರಯತ್ನಿಸಿದ್ದಾರೆ. ಗಡಿ ಭಾಗದ ಸಹಕಾರಿ ಸಂಘಗಳು ಬರಗಾಲದಿಂದ ಕಷ್ಟದಲ್ಲಿದ್ದಾಗ ಶಾಸಕ ಲಕ್ಷ್ಮಣ ಸವದಿ ಇವರ ಸಹಕಾರದಿಂದ ಸಂಕಷ್ಟದಲ್ಲಿರುವ ಸಹಕಾರಿ ಸಂಘಗಳು ಮರುಜೀವ ಹೊಂದಿವೆ. ಅವರು ಪ್ರಥಮಬಾರಿಗೆ ಗಡಿ ಭಾಗದಿಂದ ಶಾಸಕರಾಗಿದ್ದು, ಈ ಭಾಗದ ಜನರ ಯಾವುದೇ ಸಮಸ್ಯೆ ಇದ್ದರೆ, ಅವರ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತಿದ್ದಾರೆ.
ಈ ವೇಳೆ ಗ್ರಾಮ ಪಂಚಾಯತ ಸದಸ್ಯರಾದ ಮಹೇಶ ಕೇಸ್ತೆ, ಸಂತೋಷ ಕಲ್ಲೋತ್ತಿ, ಈಶ್ವರ ಕುಂಬಾರ, ಗೋಪಾಲ ಅವಳೆ, ಪವಿತ್ರಾ ನಿವಲಗಿ, ಸ್ವಾಮಿ ಕಾಂಬಳೆ, ಬಾಳು ಮಗದುಮ್, ಕೇಶವ ಭಂಡಾರೆ, ವಿಠ್ಠಲ ಐಹೊಳೆ, ಸಿದ್ದಲಿಂಗ ಇಬ್ರಾಹಿಂಪೂರ, ರಾಜು ನಂದಿವಾಲೆ, ಶಾಂತಾಬಾಯಿ ಅವರಸಂಘ, ಸೇರಿದಂತಹ ಗ್ರಾಮದ ಗಣ್ಯರು ಉಪಸ್ಥಿತ ಇದ್ದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಡ ಕುಟುಂಬದವರಿಗೆ ಕೇಂದ್ರ ಸರ್ಕಾರದಿಂದ ಬಂದಿರುವ ಪ್ರಧಾನಮಂತ್ರಿ ಆವಾಸ ಯೋಜನೆ ಫಲಾನುಭವಿ ಯಾದಿಯನ್ನು ಸಭೆಯಲ್ಲಿ ಹೇಳಿದರು.