ಜಗನ್ಮಾತೆ ಏಳುಮಕ್ಕಳ ತಾಯಿಯ ಜಾತ್ರಾಮಹೋತ್ಸವ
ಮುದ್ದೇಬಿಹಾಳ 28: ದೇವರಲ್ಲಿ ಶೃದ್ಧೆ ಭಕ್ತಿ ಇರಬೇಕೇ ವಿನಃ ದೇವರ ಹೆಸರಲ್ಲಿ ಪ್ರಾಣಿ ಹತ್ಯೆ ಮಾಡುವಂತಹ ಮೂಡನಂಭಿಕೆ ಪದ್ದತಿ ಕೈಬಿಡಬೇಕು ಜತೆ ಸರ್ವರು ಸಮಬಾಳು ಸರ್ವರು ಸಮಪಾಲು ಎನ್ನುವುದರೊಂದಿಗೆ ನಿಜವಾದ ಮಾನವೀಯ ಮೌಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡಾ ಮಾತ್ರ ದೇವರ ಕೃಪೆಗೆ ಪಾತ್ರರಾಗುತ್ತೇವೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ಹಳೆಯ ತಹಶೀಲ್ದಾರ ಕಾರ್ಯಲಯದ ಹತ್ತಿರ ಇರುವ ಮೂರು ವರ್ಷಕ್ಕೊಂಮೇ ನಡೆಯಲಿರುವ ಜಗನ್ಮಾತೆ ಏಳುಮಕ್ಕಳ ತಾಯಿಯ ಜಾತ್ರಾಮಹೋತ್ಸವದ ಧರ್ಮ ಸಭೆಯನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು,
ಇಡಿ ವಿಶ್ವದಲ್ಲಿಯೇ ಭಾರತ ಒಂದು ಪ್ರಾಚೀನ ಇತಿಹಾಸವುಳ್ಳ ಹಲವಾರು ಜಾತಿ, ಧರ್ಮಗಳನ್ನು ಹೊಂದಿದ ದೇಶ ಇಲ್ಲಿ ಹಲವಾರು ಶರಣರು, ಸಂತರು, ದಾರ್ಶನೀಕರು ಜನಿಸಿ ಅನೇಕ ಪವಾಡಗಳ ಮೂಲಕ ಜಾತಿಪದ್ದತಿಯ ವಿರುದ್ಧ ಹೋರಾಡಿದ್ದಾರೆ. ಅದರಲ್ಲಿ ಬಸವಣ್ಣನವರು ಪ್ರಮುಖ ಸ್ಥಾನದಲ್ಲಿದ್ದರೇ ಅವರು ಸೇರಿದಂತೆ ಅನೇಕ ಶರಣರು ಸಂತರು ವಚನಕಾರರು ಎಲ್ಲರೂ ಸಮಾನತೆಯ ಕನಸು ಕಂಡವರು. ಆದರೇ ಇತ್ತಿಚಿಗೆ ಜಾತಿ ಧರ್ಮಗಳ ಹೆಸರಲ್ಲಿ ದೇವರು ಸೇರಿದಂತೆ ಮಹಾನ ಶರಣರ ಸಂತರ ದಾರ್ಶನಿಕರನ್ನು ಒಂದೋಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸಿ ಅವರ ಆದರ್ಶ ಗುಣಗಳ ಬಗ್ಗೆ ಚಿಂತನೆಯಿಂದ ದೂರ ಸರಿಯುತ್ತಿದ್ದೇವೆ ಪದ್ದತಿಯನ್ನು ನಾವೇಲ್ಲರೂ ಕೈಬಿಟ್ಟು ಎಲ್ಲರನ್ನೂ ಗೌರವಿಸುವಂತಾಗಬೇಕು. ಇದೇ ಉದ್ದೇಶದಿಂದಲೇ ಡಾ, ಬಿ ಆರ್ ಅಂಬೇಡ್ಕರವರು ದೇಶದಲ್ಲಿನ ಪ್ರತಿಯೊಬ್ಬರಿಗೂ ಸರಿಸಮನಾದ ಪ್ರಜಾಪ್ರಭುತ್ವವನ್ನು ಸಂವಿದಾನದ ಮೂಲಕ ನೀಡಿದ್ದನ್ನೂ ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಉನ್ನತ ಶಿಕ್ಷಣ ಹಾಗೂ ಸಂಪತ್ತಿನಿಂದ ಮಾತ್ರ ಸಮಾಜದ ಅಭಿವೃದ್ಧಿ ಕಾಣಲು ಸಾಧ್ಯ ಎಂಬುದನ್ನು ಅರಿತು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೋಡಿಸುವಲ್ಲಿ ಮುಂದಾಗಬೇಕು. ಸಧ್ಯ ಏಳುಮಕ್ಕಳ ತಾಯಿ ದೇವಿ ಜಾತ್ರಾ ಮಹೋತ್ವವದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಜಾತ್ರಾ ಕಮೀಟಿಯವರು ಪಿಯುಸಿ ಪರೀಕ್ಷೇಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿ ಗೌರವಿಸಿದ್ದು ನಿಜಕ್ಕೂ ಇತರೇ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಆತ್ಮ ಸ್ಥೈರ್ಯ ತುಂಬುವ ಕಾರ್ಯಕ್ರಮ ಇದಾಗಿದೆ. ಈ ಹಿಂದಿನ ಬಿಜೆಪಿ ಸರಕಾರ ದಲಿತ ಸಮಾಜದ ಅಭಿವೃದ್ಧಿಗೆಂದು ಮೀಸಲಿರಿಸಿದ ಪ್ರತ್ಯೇಕ ಅನುದಾನದ ಹಣವನ್ನು ಯಾವ್ಯಾ ಯಾವ್ಯಾದಕ್ಕೋ ಬಳಸಿ ದುರುಪಯೋಗಪಡಿಸಿಕೊಂಡು ದಲಿತ ಸಮಾಜಗಳ ಅಭಿವೃದ್ಧಿಗೆ ಕುಂಟಿತಗೊಳ್ಳುವಂತೆ ಮಾಡಿತ್ತು, ಆದರೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತ ಸಮಾಜಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಮಾತ್ರವಲ್ಲದೇ ದಲಿತ ಬಗ್ಗೆ ನಿಜವಾದ ಕಾಳಜಿ ಪ್ರೀತಿ ಗೌರವವನ್ನು ಹೊಂದಿದೆ. ಆದರೇ ಜನರು ಜಾಗೃತರಾಗಬೇಕು ಯಾರು ನಮ್ಮ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಆತ್ಮಾವಲೋಖನ ಮಾಡಿಕೊಳ್ಳಬೇಕು ಕಾರಣ ಸಧ್ಯ ಮತಕ್ಷೇತ್ರದ ಎಲ್ಲ ದಲಿತ ಸಮೂದಾಯದ ಶ್ರೇಯೋಭಿವೃದ್ಧಿಗೆ ನಾನು ಮತ್ತು ನಮ್ಮ ಸರಕಾರ ಸದಾ ನಿಮ್ಮ ಜೊತೆಗಿರುತ್ತೇವೆ ಎಂದರು.
ಬಾಕ್ಸ್ಈ ವೇಳೆ ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಹಿರೇಮಠದ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಏಳುಮಕ್ಕಳ ತಾಯಿ ದೇವಿಯ ಜಾತ್ರೆಯನ್ನು ಎಲ್ಲರೂ ಅರ್ಥಪೂರ್ಣವಾಗಿ ಶೃದ್ದಾಭಕ್ತಿಯಿಂದ ವೈಭವದಿಂದ ಆಚರಿಸಲಾಗಿದೆ, ಮೈಸೂರ ಸ್ಯಾಂಡೆಲ್ ಸೋಪ್ ಎನ್ನುವೂದೇ ಜನರಿಗೆ ಗೊತ್ತಿರಲಿಲ್ಲ ಆದರೇ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಕೆಲವೇ ತಿಂಗಳಲ್ಲಿ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ)ಅವರು ದುಸ್ಥಿತಿಯಲ್ಲಿದ್ದ ಸಾಬೂನು ಕಂಪನಿಯನ್ನು ವ್ಯಾಪಕ ಪ್ರಚಾರ ಕೈಗೊಂಡು ಹಲವು ಆಯಾಮಗಳನ್ನು ಸೃಷ್ಠಿಸಿ ನೂರಾರು ಕೋಟಿ ಲಾಭ ತಂದುಕೋಡುವ ಮೂಲಕ ಯಶಸ್ವಿಯಾಗಿದ್ದು ಸರಕಾರಕ್ಕೆ ಮತ್ತು ಇಡೀ ಮತಕ್ಷೇತ್ರದ ಘನತೆ ಎತ್ತಿ ಹಿಡಿದಿದ್ದಾರೆ ಕಾರಣ ಮುಂಬರುವ ದಿನಗಳಲ್ಲಿ ಅವರು ಕ್ಯಾಬಿನೇಟ್ ದರ್ಜೇಯ ಉನ್ನತ ಸ್ಥಾನವನ್ನು ಹೊಂದಿದ ಸಚಿವರಾಗಬೇಕು ಎಂಬುದ ಮತಕ್ಷೇತ್ರದ ಜನತೆ ಆಸೆಯಾಗಿದೆ ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಸರಳ ಸಜ್ಜನಕೆ ವ್ಯಕ್ತಿತ್ವದ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರನ್ನು ಸಚಿವರನ್ನಾಗಿ ಮಾಡಿ ಗೌರವಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೋಳಸಂಗಿ, ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ಎಂಬಿ ನಾವದಗಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೇ ನೀಲಮ್ಮ ಮೇಟಿ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಸಿ ಬಿ ಅಸ್ಕಿ, , ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಶಿವಪ್ಪ ಅಜಿಮನಿ , ಪುರಸಭೆ ಸದಸ್ಯರಾದ ಶಿವು ಶಿವಪೂರ, ಕರ್ನಾಟಕ ಕೋಆಪರೇಟ್ ಬ್ಯಾಂಕನ ಅಧ್ಯಕ್ಷ ಸಿ ಎಲ್ ಬಿರಾದಾರ, ನಿರ್ಧೇಶಕ ಸತೀಶ ಓಸ್ವಾಲ್ , ಗಣೇಶ ಅನ್ನಗೋನಿ, ಶ್ರೀಕಾಂತ್ ಚಲವಾದಿ ,ರವಿ ಚಲವಾದಿ,ಯಲ್ಲಪ್ಪ ಅಜಮನಿ, ರೇವಣೇಪ್ಪ ಚಲವಾದಿ,ಶ್ರೀಕಾಂತ ಚಲವಾದಿ, ಚನ್ನಪ್ಪ ಮೂಕಿಹಾಳ,ರಾಮು ಹಂಗರಗಿ ,ಮಹಾಂತೇಶ ಚಲವಾದಿ,ಶಂಕರ ಅಜಮನಿ ,ಪವಡೆಪ್ಪ ದೊಡ್ಡಮನಿ, ಸಿದ್ದಪ್ಪ ಚಲವಾದಿ, ಮಂಜು ಚಲವಾದಿ,ವಿಕ್ರಮ್ ಚಲವಾದಿ. ನಾಗರಾಜ್ ಚಲವಾದಿ, ಸಂತೋಷ ನಾಯ್ಕೋಡಿ, ಹುಲಗಪ್ಪ ನಾಯಕಮಕ್ಕಳ, ಹಣಮಂತ ಭೋವಿ ಹಲವುರು ಇದ್ದರು.