ಸೇವಾ ಸಂಸ್ಥೆಯಿಂದ ಜೀಲಾನಿ ಕುಟುಂಬಕ್ಕೆ ಆಹಾರ ಸಾಮಗ್ರಿ ವಿತರಣೆ
ಶಿಗ್ಗಾವಿ 08: ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಸೇವಾ ಮನೋಭಾವನೆ ಎಲ್ಲರಲ್ಲೂ ಕಡಿಮೆಯಾಗುತ್ತಿದೆ. ನೊಂದವರಿಗೆ ಬಡವರಿಗೆ ಸಹಾಯ ಮಾಡುವ ಗುಣ ಎಲ್ಲರಿಗೂ ಬರಬೇಕಿದೆ. ಆ ಹಿನ್ನೆಲೆಯಲ್ಲಿ ವರುಣಗೌಡ ಪಾಟೀಲ ಸೇವಾ ಸಂಸ್ಥೆಯ ಕಾರ್ಯ ನಿಜಕ್ಕೂ ಹೆಮ್ಮೆಯ ವಿಷಯ ಎಂದು ವರುಣಗೌಡ ಪಾಟೀಲ ಸೇವಾ ಸಂಸ್ಥೆ ಕಾರ್ಯದರ್ಶಿ ನಾಗರಾಜ ಕ್ಯಾಬಳ್ಳಿ ಹೇಳಿದರು.
ಶಿಗ್ಗಾವ ನಗರದ ಆಶ್ರಯ ಪ್ಲಾಟಿನಲ್ಲಿರುವ ಮುನಾಫ್ ತಾಜಿ ಹಾಗೂ ಬಿಬಿ ಅಮಿನಾ ತಾಜಿ ಬಡ ಕುಟುಂಬಕ್ಕೆ ದಿನಸಿ ಹಾಗೂ ಧನಸಹಾಯ ವಿತರಿಸಿ ಮಾತನಾಡಿದ ಅವರು ಶಿಗ್ಗಾವಿ ನಗರದ ಈ ಬಡ ಕುಟುಂಬ ಅತ್ಯಂತ ಕಷ್ಟದ ಸ್ಥಿತಿಯಲ್ಲಿದೆ ಮನೆಯ ಯಜಮಾನರಾದ ಮುನಾಫ್ ತಾಜಿ ಅವರು ಸುಮಾರು ವರ್ಷದಿಂದ ಪಾರ್ಶವಾಯು ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ.
ಮನೆಯ ಒಬ್ಬ ಮಗ ಆಶಿಫ್ ಅಹ್ಮದ ಕೆಲವು ದಿನಗಳು ಹಿಂದೆ ತೀರಿ ಹೋಗಿದ್ದಾನೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಬೀಬಿ ಅಮಿನಾ ಅವರು ಕೂಲಿ ನಾಲಿ ಮಾಡಿ ಕುಟುಂಬ ಸಾಕುತ್ತಿದ್ದಾರೆ. ಮಕ್ಕಳ ಶಿಕ್ಷಣ ಪತಿಯ ಆಸ್ಪತ್ರೆ ಖರ್ಚಿಗೆ ಪರದಾಡುವ ಸ್ಥಿತಿ ಇದೆ ಹಾಗಾಗಿ ಏನಾದ್ರು ಸಹಾಯ ಮಾಡಿ ಎಂದು ಜೀಲಾನಿ ಅವರು ವರುಣಗೌಡ ಪಾಟೀಲ ಅವರಲ್ಲಿ ಕೇಳಿಕೊಂಡಾಗ ನಮ್ಮ ವರುಣಗೌಡ ಪಾಟೀಲ ಅವರು ಈ ಕುಟುಂಬಕ್ಕೆ ದಿನಸಿ ಹಾಗೂ ಧನಸಹಾಯ ಮಾಡಿ ಈ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ ವರುಣಗೌಡ ಪಾಟೀಲ ಅವರ ಈ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿದೆ. ಜನಪದ ಕಲಾವಿದ ಶರೀಫ ಮಾಕಪ್ಪನವರ ಅವರು ಮಾತನಾಡಿ ವರುಣಗೌಡ ಪಾಟೀಲ ಅವರು ಸುಮಾರು ವರ್ಷಗಳಿಂದ ಈ ಭಾಗದಲ್ಲಿ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ ಇವತ್ತು ಇಂದು ಈ ಬಡ ಕುಟುಂಬಕ್ಕೆ ಧನಸಹಾಯ ಹಾಗೂ ದಿನಸಿ ವಿತರಣೆ ಮಾಡಿ ಆ ಕುಟುಂಬಕ್ಕೆ ನೇರವಾಗಿರುವದು ನಿಜಕ್ಕೂ ಸಂತೋಷದ ಸಂಗತಿ ವರುಣಗೌಡ ಪಾಟೀಲ ಸೇವಾ ಸಂಸ್ಥೆಯ ಮೂಲಕ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳು ನಡೆಯಲಿ ಎಂದರು.
ಈ ಸಂಧರ್ಭದಲ್ಲಿ ವರುಣಗೌಡ ಪಾಟೀಲ ಸೇವಾ ಸಂಸ್ಥೆ ಸದಸ್ಯ ವಿನಯ್ ಹೊನ್ನಣ್ಣವರ, ಪುರಸಭೆ ಸದಸ್ಯೆ ನಸ್ರೀನಬಾನು ತಿಮ್ಮಾಪೂರ,ಮುಖಂಡ ಮುಕ್ತಾರಹ್ಮದ ತಿಮ್ಮಾಪೂರ, ಜಿಲಾನಿ ಜಂಗ್ಲಿ, ಇಮಾಮಹುಸೇನ ಅದಂಬಾಯಿ, ವರುಣಗೌಡ ಪಾಟೀಲ ಅಭಿಮಾನಿ ಭಳಗದ ಬಸನಗೌಡ ಪಾಟೀಲ, ಚೇತನ್, ಅಭಿಷೇಕ್, ಶಂಕರ ,ಮಂಜುನಾಥ್ ಹಡಪದ ಹಾಗೂ ಇತರರು ಹಾಜರಿದ್ದರು.