ಉಚಿತ ಆರೋಗ್ಯ ಶಿಬಿರಗಳಿಂದ ಬಡವರಿಗೆ ಅನಕೂಲ:ಡಾ.ಪ್ರಭುಗೌಡ

Free health camps benefit the poor: Dr. Prabhugowda

ತಾಳಿಕೋಟಿ 28: ಸಮಾಜದಲ್ಲಿರುವ ಬಡವರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಕಾರಣದಿಂದಾಗಿ ನಗರ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಇಂಥವರಿಗೆ ಅನುಕೂಲವಾಗಲೆಂದೇ ಅನುಗ್ರಹ ಆಸ್ಪತ್ರೆಯು ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ ನಮ್ಮ ಈ ಕಾರ್ಯದಲ್ಲಿ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಆಸ್ಪತ್ರೆಯವರು ನಮ್ಮೊಂದಿಗೆ ಕೈ ಜೋಡಿಸಿರುವುದರಿಂದ ನಮಗೆ ಇನ್ನು ಹೆಚ್ಚಿನ ಬಲ ಸಿಕ್ಕಂತಾಗಿದೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ಮಂಗಳವಾರ ತಾಲೂಕಿನ ಚಬನೂರ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಜಾತ್ರೋತ್ಸವ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ಆರೋಗ್ಯ ಅಭಿಯಾ

ನದಡಿ ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ಬಿ.ಎಂ.ಪಾಟೀಲ ಮಹಾವಿದ್ಯಾಲಯ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅನುಗ್ರಹ ಆಸ್ಪತ್ರೆ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ಸಾವಿರಾರು ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬರಲಾಗುತ್ತಿದೆ ಕಳೆದ 25 ವರ್ಷಗಳಿಂದ ಈ ಗ್ರಾಮದ ಶ್ರೀ ಅಮೋಘಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಇಂಥ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಈ ಶಿಬಿರಗಳಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದರು. ಅನುಗ್ರಹ ಕಣ್ಣಿನ ಆಸ್ಪತ್ರೆ ಮತ್ತು ಬಿ ಎಲ್ ಡಿಇ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ನೇತೃತ್ವದಲ್ಲಿ ನಡೆದ ನೇತ್ರ ತಪಾಸಣೆಯಲ್ಲಿ 1800 ಜನರ ನೇತ್ರ ತಪಾಸಣೆ ಮಾಡಲಾಗಿದ್ದು ಅದರಲ್ಲಿ 450 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಇನ್ನುಳಿದ ವಿವಿಧ ರೋಗಗಳಿಗೆ ಸಂಬಂಧಿಸಿದ 700 ಜನ ರೋಗಿಗಳ ತಪಾಸಣೆ ನಡೆಸಲಾಗಿದೆ. ಈ ಉಚಿತ ಆರೋಗ್ಯ ಶಿಬಿರದಲ್ಲಿ ನೇತೃ ತಜ್ಞ ವೈದ್ಯರು,ಚಿಕ್ಕ ಮಕ್ಕಳ ತಜ್ಞ ವೈದ್ಯರು, ಎಲಬು ಕೀಲು ತಜ್ಞ ವೈದ್ಯರು, ಕಿವಿ ಮತ್ತು ಮೂಗು ಗಂಟಲು ತಜ್ಞ ವೈದ್ಯರು, ಸಕ್ಕರೆ ಕಾಯಿಲೆ, ಹೃದಯ ರೋಗ, ಸ್ತ್ರೀ ರೋಗಕ್ಕೆ ಸಂಬಂಧಿಸಿದ ಹಾಗೂ ಚರ್ಮರೋಗ ತಜ್ಞ ವೈದ್ಯರು ಪಾಲ್ಗೊಂಡು ವಿವಿಧ ರೋಗಗಳಿಗೆ ಸಂಬಂಧಿಸಿದ ತಪಾಸಣೆ ಕೈಗೊಂಡು ಬಿ ಎಲ್ ಡಿ ಇ ಸಂಸ್ಥೆಯಿಂದ ಉಚಿತ ಓಷದೋಪಚಾರ ನೀಡಿದರು.

ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅನುಗ್ರಹ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ,ಡಾ.ಮಾಲಿನಿ ಪ್ರಭುಗೌಡ,ಡಾ. ಸಂತೋಷ ಪಾಟೀಲ, ಡಾ.ರೋಹಿಣಿ ಪಾಟೀಲ, ಡಾ.ಆನಂದ ಗಣ್ಣೂರ, ಡಾ.ಮಧು ಗನ್ನೂರ,ದತ್ತಾತ್ರೇಯ ಹೊಸಮಠ, ಬಿ.ಎಂ. ಪಾಟೀಲ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ವೈದ್ಯರಾದ ಡಾ. ವಿಶ್ವನಾಥ ಜಾಲವಾದಿ, ಡಾ.ಸನ್ಮಿತ್ರ ಐಹೊಳ್ಳಿ, ಡಾ.ಪವನಕುಮಾರ ಬಿರಾದಾರ, ಡಾ.ಆರ್‌.ಎನ್‌.ಕರಡಿ, ಗ್ರಾಮದ ಗಣ್ಯರಾದ ಬಸನಗೌಡ ಬ. ಪಾಟೀಲ, ಸಂಗನಗೌಡ ಪಾಟೀಲ, ಮಶಾಕಸಾಬ ದೊಡ್ಡಮನಿ, ಅನುಗ್ರಹ ಆಸ್ಪತ್ರೆ ಸಿಬ್ಬಂದಿಗಳಾದ ಸುನಿಲ್ ಕೊಡಗಾನೂರ, ಮಲ್ಲು ಗಡೇದ, ರೇಣುಕಾ ಗಡೇದ, ಸಿದ್ದು ಯಾಳವಾರ, ವಿನೋದ, ಆನಂದ ನಾವಿ, ಶರಣು ಕೊಂಡಗೂಳಿ, ಹನುಮಂತ ಕೊಂಡಗೂಳಿ, ಶಿವು ಕಲ್ಕೇರಿ, ಸಂಗಮೇಶ ಪಾಟೀಲ ಹಾಗೂ ಬಿ ಎಲ್ ಡಿ ಇ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳು ಇದ್ದರು.