ಬೆಳಗಾವಿ: ಗುಣಮಟ್ಟದ ಪರಿಸರಕ್ಕಾಗಿ ಗಿಡ ಬೆಳೆಸಿ: ಶಿವಾನಂದ ಮಗದುಮ್ಮ

ಲೋಕದರ್ಶನ ವರದಿ

ಬೆಳಗಾವಿ 22:  ಮಲೇರಿಯಾ, ಕ್ಷಯ ರೋಗಗಳಿಗಿಂತ ಅಧಿಕ ಸಂಖ್ಯೆಯ ಜನರು ವಾಯು ಮಾಲಿನ್ಯದಿಂದ ಸಾವಿಗೆ ತುತ್ತಾಗುತ್ತಿದ್ದಾರೆ. ಗುಣಮಟ್ಟದ ಗಾಳಿ ಸೇವಿಸಲು ಗಿಡ, ಮರಗಳನ್ನು ಬೆಳೆಸಬೇಕೆಂದು ಸಾರಿಗೆ ಪ್ರಾದೇಶಿಕ ಆಯುಕ್ತರು ಶಿವಾನಂದ ಮಗದುಮ್ಮ ಹೇಳಿದರು.

ನಗರದ ಜೈನ್ ಇಂಜಿನಿಯರಿಂಗ್ ಕಾಲೇಜು ಸಭಾಭವನದಲ್ಲಿ ಶುಕ್ರವಾರ 22 ರಂದು ಸಾರಿಗೆ ಪ್ರಾದೇಶಿಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಾಯು ಮಾಲಿನ್ಯ ಸಮಸ್ಯೆ ತುಂಬಾ ಗಂಭೀರವಾಗಿದೆ. ಈ ಕುರಿತು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ ಎಂದರು.

ವಾಯು ಮಾಲಿನ್ಯದ ಪರಿಣಾಮವಾಗಿ ಕೆಲ ನಗರಗಳು ವರ್ಷದ ಕೆಲ ಸಮಯ ತನ್ನ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತಾಗಿದೆ. ವಿಷಕಾರಿ ಗಾಳಿಯಿಂದಾಗಿ ಸಾಮಾನ್ಯ ಕಾರ್ಯಚಟುವಟಿಕೆ ಅಸಾಧ್ಯವಾಗುತ್ತಿದೆ. ಇದಕ್ಕೆ ದೆಹಲಿ ತಾಜಾ ಉದಾಹರಣೆ ಎಂದರು.

ದೆಹಲಿ ಇಂದು ದಟ್ಟ ಹೊಗೆಯಿಂದ ಆವೃತವಾಗಿದೆ. ವಾಯು ಮಾಲಿನ್ಯದ ಅಪಾಯದ ಮಟ್ಟ 20 ಪಟ್ಟು ಅಧಿಕಗೊಂಡಿದೆ. ಅಧ್ಯಯನದ ಪ್ರಕಾರ ದೆಹಲಿಯಲ್ಲಿ ವಾಸಿಸುವ ಮಕ್ಕಳು ಬಾಲ್ಯದಲ್ಲಿಯೇ ಬದಲಾಯಿಸಲಾಗದಷ್ಟು ಶ್ವಾಸಕೋಶದ ಹಾನಿಗೆ ತುತ್ತಾಗಿದ್ದಾರೆ ಎಂದರು.

ಪರಿಸರ ಕಾಳಜಿ ಪ್ರತಿಯೊಬ್ಬರಲ್ಲಿ ಮೂಡಬೇಕಿದೆ. ಪ್ರಮುಖವಾಗಿ ವಿದ್ಯಾಥರ್ಿಗಳು ಇತ್ತ ಗಮನ ಹರಿಸಬೇಕು. ಸಾರ್ವಜನಿಕ ಮನೋಭಾವ ಬದಲಾಗಬೇಕು. ನಾವೆಲ್ಲರೂ ಆರೋಗ್ಯಕರ ವಾತಾವರಣಕ್ಕಾಗಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ವೈಜ್ಞಾನಿಕ ಅಧಿಕಾರಿ ಡಾ. ಜಿ.ಎಂ. ಪಾಟೀಲ ಮಾತನಾಡಿ, ಸಾರ್ವಜನಿಕರು ಅಗತ್ಯವಿದ್ದಾಗ ಮಾತ್ರ ವಾಹನ ಬಳಕೆ ಮಾಡಬೇಕು. ನಗರ ಸಂಚಾರಕ್ಕಾಗಿ ಕೇವಲ ಬೈಸಿಕಲ್ ಬಳಸಬೇಕು ಎಂದು ಸಲಹೆ ನೀಡಿದರು.

ಜೈನ್ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಕೆ.ಜಿ. ವಿಶ್ವನಾಥ ಮಾತನಾಡಿ, ಪರಿಸರ ರಕ್ಷಣೆಗಾಗಿ ಪ್ರತಿಯೊಬ್ಬರು ದೊಡ್ಡ ಪ್ರಮಾಣದಲ್ಲಿ ಒಗ್ಗೂಡಿ ಕೆಲಸ ಮಾಡಬೇಕು. ಪ್ರತಿಯೊಬ್ಬ ವಿದ್ಯಾಥರ್ಿಗಳು ಬೈಸಿಕಲ್ನಲ್ಲಿಯೇ ಶಾಲೆ-ಕಾಲೇಜುಗಳಿಗೆ ತೆರಳುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಬೈಸಿಕಲ್ ಮೇಲೆ ಬರುವ ಜೈನ್ ಕಾಲೇಜು ವಿದ್ಯಾಥರ್ಿಗೆ ಪ್ರತ್ಯೇಕ ಪಾಕರ್ಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಸೈಕಲ್ ಮೇಲೆ ಬರುವ ವಿದ್ಯಾಥರ್ಿಗೆ 500 ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಭರವಸೆ ನೀಡಿದರು.

ಆರ್ಟಿಓ ಇನ್ಸ್ಪೆಕ್ಟರ್ ಓಂಪ್ರಕಾಶ ಆಡಿನ್ ಸ್ವಾಗತಿಸಿ, ಪರಿಚಯಿಸಿದರು. ಪ್ರೊ. ಶಶಾಂಕ ವನಕುದರಿ, ಪ್ರೊ. ಸಿ.ಎ. ನುನುಜಾ ಭತಿ, ಪ್ರೊ. ರವಿ ಪ್ರಕಾಶ, ಆಸಿಫ್, ಯೋಗಿತಾ ಇತರರು ಇದ್ದರು. ಪ್ರೊ. ಪ್ರಕಾಶ ಕೆ. ಸೋನ್ವಾಲ್ಕರ್ ವಂದಿಸಿದರು.