ಯರಗಟ್ಟಿ, 02 : ವಿದ್ಯೆ ನೀಡಿದ ಗುರುಗಳನ್ನು ನೆನೆದರೆ ಅವರು ನೀಡಿದ ವಿದ್ಯೆಯನ್ನು ಸ್ಮರಣೆಗೆ, ಸ್ಮೃತಿಗೆ ತಂದುಕೊಂಡಂತೆ, ಇದು ಬಾಳಿಗೆ ಬುತ್ತಿಯಿದ್ದಂತೆ. ಕಲಿಸಿದ ಗುರುಗಳ ಆದರ್ಶವನ್ನು ನೆನೆದು ಅವರನ್ನು ಗೌರವಿಸಿದರೆ ವಿದ್ಯಾರ್ಥಿಗಳು ತಮ್ಮನ್ನು ತಾವೇ ಗೌರವಿಸಿದಂತೆ ಎಂದು ಬೈಲಹೊಂಗಲದ ಶ್ರೀ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ಸಮೀಪದ ಮುನವಳ್ಳಿ ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಿಂದ ಗೌರವ ಗುರುವಂದನೆ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಗೌರವಾಧ್ಯಕ್ಷರು, ಶ್ರೀ ಸೋಮಶೇಖರ ಮಠದ ಪೂಜ್ಯರಾದ ಶ್ರೀ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಯಕ್ಕುಂಡಿ ಸರಕಾರಿ ಪಿ.ಯು.ಕಾಲೇಜಿನ ರಮೇಶ ಮುರಂಕರ, ಗಂಗಾಧರ ಗೊರಾಬಾಳ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು.
ಡಾ. ಅಜೇಯ ಅಬ್ಬಾರ, ಪ್ರಾ. ಎಂ.ಎಚ್.ಪಾಟೀಲ, ಪ್ರಾ. ಕೆ.ಬಿ.ನಲವಡೆ, ಎಂ. ಗೀರೀಶ, ಮಂಜುಳಾ ಭಾಂಡೇಕರ, ಜಿ.ಜಿ.ಲಮಾಣಿ, ಡಾ.ಸಿ.ಬಿ.ಕಾರಬಾರಿ, ಎಸ್.ಪಿ.ಗೋಪಶೆಟ್ಟಿ, ದಾನು ಗದಗಿನ, ಆಯ್.ಕೆ.ಮಠಪತಿ, ಶೇಖರ ಮುಪ್ಪಿನವರಮಠ, ಉಮೇಶ ಗುದಗಾಪೂರ ಸೇರಿದಂತೆ ಶಿಕ್ಷಕ ಬಳಗವನ್ನು ಗೌರವಿಸಿ ಸನ್ಮಾನಿಸಲಾಯಿತು.