ಕರ್ನಾಟಕದ ಯಾವುದೇ ಚಿತ್ರ ಮಂದಿರಗಳಲ್ಲಿ ಥಗ್ ಲೈಫ ಬಿಡುಗಡೆ ಮಾಡದಿರಲು ಕರವೇ ಆಗ್ರಹ

Karave demands that Thug Life not be released in any cinemas in Karnataka

ವಿಜಯಪುರ 29 : ಕರ್ನಾಟಕದ ಯಾವುದೇ ಚಿತ್ರ ಮಂದಿರಗಳಲ್ಲಿ ತಮಿಳು ಚಲನಚಿತ್ರ ಥಗ್ ಲೈಫ ಬಿಡುಗಡೆ ಮಾಡಬಾರದು ಎಂದು ಒತ್ತಾಯಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರಶೆಟ್ಟಿ ಬಣ) ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಅ ತಾಳಿಕೋಟಿ ಮಾತನಾಡಿ, ಮೊನ್ನೆ ನಡೆದ ಥಗ್ ಲೈಫ್ ಚಲನಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭದಲ್ಲಿ ತಮಿಳು ನಟ ಕಮಲ ಹಾಸನ್ ಕನ್ನಡ ಹುಟ್ಟಿದ್ದು ತಮಿಳುನಿಂದ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವದಲ್ಲದೆ ಕನ್ನಡಿಗರ ಹಾಗೂ ತಮಿಳು ಮಧ್ಯ ವಿಷಬಿಜ ಬಿತ್ತುವದೊರಂದಿಗೆ ಕನ್ನಡಿಗರಿಗೆ ಅಫಮಾನ ಮಾಡಿರುತ್ತಾರೆ ಪ್ರತಿ ಭಾರಿ ತಮಿಳು ಹೊಸ ಚಲನಚಿತ್ರ ಬಿಡುಗಡೆ ಸಂಧರ್ಭದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಮಾಡುತ್ತಲ್ಲೆ ಬಂದಿದ್ದಾರೆ. ಈ ಹೇಳಿಕೆಗಳು ನಿರಂತರವಾಗಿ ನಿಡಿ ಹೊಗುತ್ತಾರೆ. ನಂತರ ಇಲ್ಲಿ ಕನ್ನಡಿಗರು ಮತ್ತು ತಮಿಳು ಮಧ್ಯ ಶಾಂತಿ, ಸು ವ್ಯವಸ್ತೆ ಹದಗೆಡುವಂತೆ ಮಾಡಿರುತ್ತಾರೆ. ಆದರಿಂದ ಹಿಂತಹ ಹೇಳಿಕೆ ನೀಡಿರುವ ಈ ನಟನ ಚಿತ್ರ ನಮ್ಮ ರಾಜ್ಯದಲ್ಲಿ ಥಗ್ ಲೈಪ್ ಚಿತ್ರ ಬಿಡುಗಡೆ ಮಾಡಬಾರದೆಂದು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಹಿರೇಮಠ, ಆನಂದ ಹಡಗಲಿ, ರವಿ ಗೊಳಸಂಗಿ, ಸತೀಶ, ವಿನುತ, ಭೀಮು, ವಿರೇಶ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.