ಸಂಯೋಜನಾ-2025 ಕಾರ್ಯಕ್ರಮಸುಪ್ತ ಪ್ರತಿಭೆಗಳು ಅನಾವರಣಗೊಳ್ಳಲಿ - ಶ್ರೀ. ನಿಲಿಂಗಪ್ಪ ಮಟ್ಟಿಹಾಳ
ದಾರವಾಡ 30: ಜೆ.ಎಸ್.ಎಸ್. ಮಂಜುನಾಥೇಶ್ವರ ಎಂ.ಸಿ.ಎ. ಇನ್ಸ್ಟಿಟ್ಯೂಟ್ ಮತ್ತು ಜೆ.ಎಸ್.ಎಸ್. ಡಾ. ಡಿ. ವೀರೇಂದ್ರ ಹೆಗ್ಗಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಸಹಯೋಗದಲ್ಲಿ “ಸಂಯೋಜನಾ 2025” ಒಂದು ದಿನದ ರಾಜ್ಯ ಮಟ್ಟದ ಪ್ರತಿಭಾ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು, (ಮೌಲ್ಯಮಾಪನ) ನಿಲಿಂಗಪ್ಪ ಮಟ್ಟಿಹಾಳ ಅವರು ಉದ್ಘಾಟಿಸಿ ಮಾತನಾಡಿ ಮಧುರ ಚೆನ್ನರ ಕವನವನ್ನು ವಾಚಿಸಿ, ಪ್ರತಿಭೆಗಳು ತಮ್ಮ ಕೌಶಲ್ಯವನ್ನು ಸಮಾಜದಲ್ಲಿ ಮಾದರಿಯಾಗಬೇಕು. ಅಸಂಸ್ಕ್ರತಿಯಿಂದ ಸಂಸ್ಕ್ರತಿಯೆಡೆಗೆ ಎಲ್ಲರೂ ದಾರೀದೀಪವಾಗಿ ಬೆಳಗಬೇಕು. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೆ ಸಾಲದು ಅದನ್ನು ಹೇಗೆ ಪ್ರದರ್ಶಿಸುವುದು ಮುಖ್ಯ. ಸಂಯೋಜನಾ-2025 ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಪ್ರತಿಬೆಯನ್ನು ಪ್ರದರ್ಶಿಸುವ ಕಲೆಯನ್ನು ಹೊರತರಲು ಜೆ.ಎಸ್.ಎಸ್ ಸಂಸ್ಥೆ ಪ್ರಯತ್ನಿಸಿದೆ ಎಂದು ಮಾತನಾಡಿದರು.
ಜೆ.ಎಸ್.ಎಸ್ ಎಂ.ಸಿ.ಎ ಕಾಲೇಜಿನ ನಿರ್ದೇಶಕರಾದ ಡಾ. ಸೂರಜ್ ಜೈನ ಅವರು ಮಾತನಾಡಿ ಪ್ರೀತಿ ಮತ್ತು ನಂಬಿಕೆ ಮನುಷ್ಯನಲ್ಲಿ ಬಹು ಮುಖ್ಯವಾದುದು. ಮನುಷ್ಯತ್ವ ಇರದಿದ್ದರೆ ಎಷ್ಟು ದೊಡ್ಡ ವ್ಯಕ್ತಿಯಾದರು ಪ್ರಯೋಜನವಿಲ್ಲ, ಮಾನವೀಯತೆ ಇರದಿದ್ದರೆ ಎಲ್ಲವೂ ವ್ಯರ್ಥ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಯೋಚಿಸಬೇಕು, ನಕಾರಾತ್ಮವಾಗಿ ಯೋಚಿಸಿದರೆ ಎಲ್ಲವೂ ಅಸಾಧ್ಯ, ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಿದರೆ ಯಾವದೇ ಕಾರ್ಯದಲ್ಲಿಯೂ ಯಶಸ್ಸು ಪಡೆಯಬಹುದು, ವಿದ್ಯಾರ್ಥಿಗಳು ನಕಾರಾತ್ಮಕವನ್ನು ಸಕಾರಾತ್ಮಕವಾಗಿ ಬದಲಾಯಿಸಿ ತಮ್ಮ ಭವಿಷ್ಯದಲ್ಲಿ ಯಶಸ್ವಿಯಾಗಬೇಕು. ಜೆ.ಎಸ್.ಎಸ್ ಪೂಜ್ಯ ವೀರೇಂದ್ರ ಹೆಗ್ಗಡೆಯವರು, ದಿ. ನ. ವಜ್ರಕುಮಾರ ಹಾಗೂ ಡಾ. ಅಜಿತ ಪ್ರಸಾದರವರ ಆಶಿರ್ವಾದ ಹಾಗೂ ಮಾರ್ಗದರ್ಶನದಲ್ಲಿ ನೈತಿಕ ಶಿಕ್ಷಣ ನೀಡತ್ತಾ ಬಂದಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸದಾಕಾಲ ಶ್ರಮಿಸುತ್ತಿದೆ ಎಂದು ಹೇಳಿದರು.
ಜೆ.ಎಸ್.ಎಸ್ ಎಂ.ಬಿ.ಎ ನಿರ್ದೇಶಕರಾದ ಡಾ. ಸುನೀಲ ಕುಮಾರ ಹೀರೆಮಠ ಪ್ರಾಸ್ತಾವಿಕ ಮಾತನಾಡಿ “ಸಂಯೋಜನಾ-25” ಕಾರ್ಯಕ್ರಮದಲ್ಲಿ ಕಲಾಸಂಗಮ, ಚತುರ-ಕ್ವಿಜ್, ಸಮರ್ಥ ನಾಯಕ, ನೃತ್ಯಾಂಗನ ಮತ್ತು ಚಿತ್ರವಾಹಿನಿ ಸ್ಫರ್ಧೆಗಳನ್ನು ಎರಿ್ಡಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಡೆಯಿಂದ ಸ್ನಾತಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆೆಂದು ಮಾಹಿತಿ ತಿಳಿಸಿದರು.ಈ ಕಾರ್ಯಕ್ರಮದ ಕಾರ್ಯಕ್ರಮದಲ್ಲಿ ಡಾ. ಸುನೀಲಕುಮಾರ ಹಿರೇಮಠ, ಮಂಜುನಾಥ ಪೂಜಾರ, ಶ್ರೀಮತಿ ಪೂಜಾ ಅವರು ಉಪಸ್ಥಿತರಿದ್ದರು. ಕು. ಸರೋಜಾ ಕಲಕೇರಿ, ಕು. ಸಿಂಚನಾ ನಾಯ್ಕ ನಿರೂಪಿಸಿದರು.
ಸಮಾರೊಪ ಸಮಾರಂಭ ಮತ್ತು ಪ್ರಶಸ್ತಿ ವಿತರಣೆಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಂ.ಸಿ.ಎ ನಿರ್ದೇಶಕರಾದ ಡಾ. ಸೂರಜ್ ಜೈನ್ ಮತ್ತು ಎಂ.ಬಿ.ಎ ನಿರ್ದೇಶಕರಾದ ಡಾ. ಸುನೀಲ್ಕುಮಾರ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿದರು. ಕಲಾಸಂಗಮ ಸ್ಪರ್ಧೆಯಲ್ಲಿ ಪ್ರಥಮ-ಡಾ. ಸರೋಜಿನಿ ಶಿಂತ್ರಿ ಬಿ.ಸಿ.ಎ ್ಘ ಬಿ.ಬಿ.ಎ ಕಾಲೇಜು, ದ್ವಿತೀಯ ಕೆ.ಎಲ್.ಇ. ಕಾಲೇಜು ಬಿ.ಬಿ.ಎ, ತೃತೀಯ ಸಮರ್ಥ ಡಿಗ್ರಿ ಕಾಲೇಜು., ಚಿತ್ರವಾಹಿನಿಯಲ್ಲಿ ಪ್ರಥಮ ಎಸ್.ಎಮ್.ಎಸ್. ಆರ್. ಕೆ.ಎಲ್.ಇ. ಟೆಕ್ ಬಿ.ಕಾಂ, ದ್ವಿತೀಯ ಜೆ.ಎಸ್.ಎಸ್. ಎಸ್.ಎಮ್.ಐ. ಯುಜಿ ಮತ್ತು ಪಿಜಿ ಅಧ್ಯಯನ ಸಂಸ್ಥೆ, ಧಾರವಾಡ., ಚತುರ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಎಸ್.ಕೆ. ಗುಬ್ಬಿ ವಿಜ್ಞಾನ ಕಾಲೇಜು ಧಾರವಾಡ, ದ್ವಿತೀಯ ಜೆ.ಜಿ. ಕಾಮರ್ಸ್ ಕಾಲೇಜು ಹುಬ್ಬಳ್ಳಿ, ತೃತೀಯ ಎಚ್.ಸಿ.ಇ.ಎಸ್. ಬಿ.ಸಿ.ಎ. ಕಾಲೇಜು, ಗದಗ. ಸಮರ್ಥ ನಾಯಕ ಸ್ಫರ್ಧೆಯಲ್ಲಿ ಪ್ರಥಮ ಕೆ.ಎಲ್.ಇ. ಕಾಲೇಜು ಬಿ.ಬಿ.ಎ., ನೃತ್ಯಾಂಗನ ಸ್ಪರ್ಧೆಯಲ್ಲಿ ಪ್ರಥಮ ಜೆ.ಜಿ. ಕಾಲೇಜ ಆಫ್ ಕಾಮರ್ಸ್, ದ್ವಿತೀಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಳಿಯಾಳ, ತೃತೀಯ ಜೆ.ಎಸ್.ಎಸ್. ಎಸ್.ಎಮ್.ಐ. ಯುಜಿ ಮತ್ತು ಪಿಜಿ ಅಧ್ಯಯನ ಸಂಸ್ಥೆ, ಧಾರವಾಡ ಗಳಿಸಿದವು. ಜನರ್ಲ್ ಚಾಂಪಿಯನ್ ಶಿಪ್ ಜೆ.ಜಿ. ಕಾಮರ್ಸ್ ಕಾಲೇಜು ಹುಬ್ಬಳ್ಳಿ, ರನ್ನರ್ಸ ಅಪ್ ಕೆ.ಎಲ್.ಇ. ಕಾಲೇಜ್ ಆಫ್ ಬಿ.ಬಿ.ಎ ಹುಬ್ಬಳ್ಳಿ ಮುಡಿಗೆರಿಸಿಕೊಂಡವು.