ಬೆಳಗಾವಿ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಲೋಕದರ್ಶನ ವರದಿ

ಬೆಳಗಾವಿ 17: ದಿ. 16ರಂದು ಶಾಸಕ ಅನಿಲ ಬೆನಕೆರವರು ರಾಮತೀರ್ಥ ನಗರದ ಬಸವೇಶ್ವರ ಬಡಾವಣೆ ಹಾಗೂ ಶಿವಾಲಯದಲ್ಲಿ ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ರಾಮತೀರ್ಥ ನಗರದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅನುದಾನದಡಿಯಲ್ಲಿ ಇಲ್ಲಿನ ಸ್ಥಳೀಯರ ಬೇಡಿಕೆಗಣುಗುಣವಾಗಿ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸುವ ಸಲುವಾಗಿ ಬಸವೇಶ್ವರ ಬಡಾವಣೆ ಹಾಗೂ ಶಿವಾಲಯದಲ್ಲಿ ಶುಧ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಗಿದೆ ಅವುಗಳನ್ನು ಸಾರ್ವಜನಿಕರು ವ್ಯವಸ್ಥಿತವಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು. 

ರಾಮತೀರ್ಥ ನಗರದಲ್ಲಿ ನೀರು ಪೂರೈಕೆ ಮಾಡುತ್ತಿರುವ ಪಂಪಸೆಟ್ ಹಾಳಾಗಿರುವುದರಿಂದ ರಾಕಸಕೊಪ್ಪ ಜಲಾಶಯದಿಂದ ಬರುವ ನೀರನ್ನು ಈ ಪ್ರದೇಶಕ್ಕೆ 3 ದಿನಗಳವರೆಗೆ ಒದಗಿಸಲು ಪ್ರಯತ್ನಿಸಲಾಗುವುದು ಇಲ್ಲವಾದರೆ ಬಹಳ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರುಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು ಇದರ ಸಲುವಾಗಿ ಇಂದು ಸಾಯಂಕಾಲ 4 ಗಂಟೆಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ಜಲ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ಚಚರ್ಿಸಿ ರಾಮತೀರ್ಥ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಮತ್ತು ಅವಶ್ಯವಿದ್ದಲ್ಲಿ ಇನ್ನೂ 2 ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬುಡಾ ಅಭಿಯಂತರ ವಿ.ಎಸ್. ಹಿರೇಮಠ, ಈರಯ್ಯ ಖೋತ, ವಿಲಾಶ ಕೇರೂರ, ಆನಂದ ಕರಿಲಿಂಗನ್ನವರ, ಎಸ್.ಎಸ್. ಕಿವಡಸನ್ನವರ, ಕೋಲಕಾರ, ರಾಜು ಪಾಟೀಲ, ಸುರೇಶ ಯಾಧವ, ನಾಗೇಶ ತಡಸನ್ನವರ, ಬಸವರಾಜ ಜಿಲರ್ಿ ಹಾಗೂ ಇತರರು ಉಪಸ್ಥಿರಿದ್ದರು.