ಮಾರ್ಚ್‌ 30ರಂದು ವಿದ್ಯಾಪೀಠದಲ್ಲಿ ಪಂಚಾಂಗ ಶ್ರವಣ

Panchanga Shravan at Vidyapeeth on March 30th

ಬೆಳಗಾವಿ 29: ಇಲ್ಲಿಯ ರೈಲ್ವೆ ಮೇಲ್ಸೇತುವೆ ಬಳಿಯ ವಿದ್ಯಾ ವಿಹಾರ ವಿದ್ಯಾಪೀಠ, ಶ್ರೀ ರಾಘವೇಂದ್ರ ಸ್ವಾಮಿಗಳ ನವ ವೃಂದಾವನದಲ್ಲಿ ಯುಗಾದಿ ಮಹೋತ್ಸವ ರವಿವಾರ 30 ಮಾರ್ಚ್‌ 2025ರಂದು ನಡೆಯಲಿದೆ.  

ಕುಲಪತಿ ವಿಜಯೇಂದ್ರ ಶರ್ಮಾ ರಿಂದ ಸಂಜೆ 6:00 ರಿಂದ  ಪಂಚಾಂಗ ಶ್ರವಣ ವರ್ಷ ಭವಿಷ್ಯ, ದ್ವಾದಶ ರಾಶಿ ಭವಿಷ್ಯ ಕುರಿತು ಪ್ರವಚನ, ವಸಂತ ಪೂಜೆ ನಡೆಯಲಿದೆ.  

ಯುಗಾದಿ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಗೌರವ ಕಾರ್ಯದರ್ಶಿ ತಿಳಿಸಿದ್ದಾರೆ.