ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಲಸಿಕೆ ಹಾಕಿಸಿ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್

ಗದಗ  11:   ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆರೋಗ್ಯಕರ ದೇಹ ಮುಖ್ಯ. ಈ ನಿಟ್ಟಿನಲ್ಲಿ   ಗಂಟಲು ಮಾರಿ, ನಾಯಿ ಕೆಮ್ಮು   ಮತ್ತು ಧನುವರ್ಾಯು ರೋಗಗಳು ಬಾರದಂತೆ ಮುಂಜಾಗ್ರತೆ ಕ್ರಮವಾಗಿ   ಶಾಲಾ ಮಕ್ಕಳ ವಿಶೇಷ ಲಸಿಕಾ  ಅಭಿಯಾನದಡಿ ಪ್ರತಿಯೊಂದು  ಅರ್ಹ ಮಗು ಲಸಿಕೆ ಪಡೆಯಬೇಕು ಎಂದು  ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ತಿಳಿಸಿದರು.

ಗದಗನ ಸಿದ್ಧಲಿಂಗೇಶ್ವರ ನಗರದ ಸಕರ್ಾರಿ ಪ್ರೌಢಶಾಲೆಯಲ್ಲಿಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ  ವಿವಿಧ ಇಲಾಖೆಯ ಸಹಯೋಗದಲ್ಲಿ  ಏರ್ಪಡಿಸಲಾಗಿದ್ದ  ವಿಶೇಷ ಶಾಲಾ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ಲಸಿಕೆ ಪಡೆಯುವುದು ಪ್ರತಿ ಮಗುವಿನ ಹಕ್ಕಾಗಿದೆ. ಪ್ರತಿ ಮಗುವೂ ತಪ್ಪದೇ ಲಸಿಕೆ ಹಾಕಿಸಿಕೊಂಡರೆ    ಆರೋಗ್ಯಕರ ಜೀವನ  ನಡೆಸಲು ಸಹಕಾರಿಯಾಗುತ್ತದೆ.  ಆರೋಗ್ಯ ಇಲಾಖೆಯ  ಜೊತೆಗೆ ಶಿಕ್ಷಣ ಇಲಾಖೆ   ಕೈಜೋಡಿಸಿ   ಲಸಿಕಾ ಅಭಿಯಾನವನ್ನು  ಯಶಸ್ವಿಗೊಳಿಸಬೇಕೆಂದು ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ  ತಿಳಿಸಿದರು.     

ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ   ಮಾತನಾಡಿ  ಜಿಲ್ಲೆಯಲ್ಲಿ    ಆರೋಗ್ಯ ಇಲಾಖೆಯಿಂದ  ವಿಶೇಷ  ಶಾಲಾ  ಲಸಿಕಾ ಅಭಿಯಾನದಡಿಯಲ್ಲಿ  ಡಿಸೆಂಬರ್ 11 ರಿಂದ 31ರವರೆಗೆ  ಗಂಟಲು ಮಾರಿ, ನಾಯಿಕೆಮ್ಮು, ಧನುವರ್ಾಯು ರೋಗಗಳು ಬಾರದಂತೆ ಮುಂಜಾಗ್ರತೆ ಕ್ರಮವಾಗಿ  ಲಸಿಕೆಯನ್ನು  ಹಾಕಲಾಗುತ್ತಿದೆ.    5 ಮತ್ತು 6ನೇ ವಯಸ್ಸಿನ ಮಕ್ಕಳಿಗೆ ಡಿಪಿಟಿ ವರ್ದಕ ಲಸಿಕೆಯನ್ನು ಹಾಗೂ 10 ಮತ್ತು 16 ವರ್ಷದ ಮಕ್ಕಳಿಗೆ  ಟಿಡಿ ಲಸಿಕೆಯನ್ನು ನೀಡಲಾಗುವುದು.    ಜಿಲ್ಲೆಯಲ್ಲಿ   5 ಮತ್ತು 6 ಹಾಗೂ  10 ಮತ್ತು 16 ವಯಸ್ಸಿನ ಒಟ್ಟು 65,000 ಮಕ್ಕಳಿಗೆ   ಡಿಪಿಟಿ ವರ್ಧಕ ಲಸಿಕೆ ಮತ್ತು  ಟಿಡಿ ಲಸಿಕೆಯನ್ನು ನೀಡಲಾಗುವ ಗುರಿ ಹೊಂದಲಾಗಿದೆ.  ಮಕ್ಕಳು   ಲಸಿಕೆ ತೆಗೆದುಕೊಳ್ಳುವುದರಿಂದ  ಯಾವುದೇ ಅಪಾಯ ಇರುವುದಿಲ್ಲ. ಒಂದು ವೇಳೆ ಲಸಿಕೆ ಹಾಕಿದ ತಕ್ಷಣ ಜ್ವರ ಬಂದರೆ ಸಮೀಪದ ತಾಲೂಕಾ ಆರೋಗ್ಯಾಧಿಕಾರಿಗಳನ್ನು ಸಂಪಕರ್ಿಸಬಹುದು.   ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆರೋಗ್ಯ ಕೇಂದ್ರ, ಹತ್ತಿರ ಅಂಗನವಾಡಿಗಳಲ್ಲಿ  ಲಸಿಕೆ ನೀಡಲಾಗುವುದು. ಎಂದು  ಡಾ. ಸತೀಶ ಬಸರಿಗಿಡದ ತಿಳಿಸಿದರು.  ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ  ವಿಶೇಷ ಶಾಲಾ ಲಸಿಕಾ ಅಭಿಯಾನದ  ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ   ನಾಗನೂರ,  ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ.ಕೆ. ಭಜಂತ್ರಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್.ನೀಲಗುಂದ,  ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಕೆಳದಿಮಠ,  ಶಾಲಾ ಮುಖ್ಯಗುರುಗಳಾದ ಎಸ್.ಎಸ್. ಮುಳಗುಂದಮಠ,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ  ಸುರೇಶ ಎಚ್.,  ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೆಶ ಕರಮುಡಿ, ಜಿಲ್ಲಾ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ  ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ   ಜಿಲ್ಲಾ ನರ್ಶಿಗ್ ಅಧಿಕಾರಿ ಪದ್ಮಾವತಿ ಚಿಲ್ಲಾಳ ಸ್ವಾಗತಿಸಿದರು. ಅಣ್ಣಿಗೇರಿ ವಂದಿಸಿದರು.