ಬಳ್ಳಾರಿ; ಪ್ರಗತಿ ಪರಿಶೀಲನಾ ಸಭೆ: ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಲು ಡಿಸಿ ಸೂಚನೆ

ಬಳ್ಳಾರಿ 08: ಬರುವ ಮುಂದಿನ ಒಂದು ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪ್ರತಿಯೊಬ್ಬ ಮೇಲ್ವಿಚಾರಕರು ಭೇಟಿ ನೀಡಬೇಕು. ಮಗುವಿನ ತೂಕ ಮತ್ತು ಅಪೌಷ್ಠಿಕತೆಯಿಂದ ನರಳುತ್ತಿರುವ ಹಾಗೂ ಆರೋಗ್ಯಯುತ ಮಕ್ಕಳ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆಗಳು ಹಾಗೂ ಸಲಹೆಗಳ ಸಮೇತ ಅಂಗನವಾಡಿವಾರು ಮಾಹಿತಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವಿಗೂ ಆರೋಗ್ಯ ತಪಾಸಣೆಯನ್ನು ಗ್ರೇಡ್ವೈಸ್ ಮಾಡಬೇಕು ಮತ್ತು ಮಕ್ಕಳಿಗೆ ಏನಾದರೂ ಸಮಸ್ಯೆ ಇದೆಯೇ? ಮತ್ತು ಬೇರೆ ಯಾವುದಾದರೂ ಕಾಯಿಲೆ ಇದೆಯಾ ಎಂಬುದನ್ನು ಪರಿಶೀಲಿಸಬೇಕು. ಎರಡ್ಮೂರು ಅಂಗನವಾಡಿ ಸೇರಿಸಿಕೊಂಡು ಹೆಲ್ತ್ ಕ್ಯಾಂಪ್ ಮಾಡಿಸಬೇಕು. ಪ್ರತಿ ಮಗುವಿಗೂ ಆರೋಗ್ಯ ತಪಾಸಣೆ ಮಾಡಿ ಅದರ ವಿವರ ಒಳಗೊಂಡ ಕಾಡರ್್ ನಿರ್ವಹಿಸಬೇಕು. ಇದರಿಂದ ಆ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಹಿನ್ನೆಲೆ ತಿಳಿದು ಕ್ರಮವಹಿಸಲು ಅನುಕೂಲವಾಗುತ್ತದೆ ಎಂದರು.

ಸಿಡಿಪಿಒಗಳು ತಮ್ಮ ವ್ಯಾಪ್ತಿಯ ಮೇಲ್ವಿಚಾರಕರು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲು ಮತ್ತು ಡಿಎಚ್ಒ ಅವರು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಭೆ ಕರೆದು ಅವರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಏರ್ಪಡಿಸುವಂತೆ ತಿಳಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

ಈ ವರ್ಷ 30 ಹೊಸ ಅಂಗನವಾಡಿ ಕೇಂದ್ರಗಳು: 

ಜಿಲ್ಲೆಯಲ್ಲಿ ಈ ವರ್ಷ 30 ಹೊಸ ಅಂಗನವಾಡಿ ಕೇಂದ್ರಗಳು ಆರಂಭಿಸುವುದಕ್ಕೆ ಸರಕಾರದಿಂದ ಮಂಜೂರಾತಿ ದೊರಕಿದ್ದು, ಅವುಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್ ಅವರು ಹೇಳಿದರು.

ಜಿಲ್ಲೆಯಲ್ಲಿ 2784 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 561 ಕೇಂದ್ರಗಳು ಬಾಡಿಗೆಯಲ್ಲಿ ನಡೆಯುತ್ತಿವೆ. 241 ಕಟ್ಟಗಳು ನಿಮರ್ಾಣ ಹಂತದಲ್ಲಿರುವುದನ್ನು ಸಿಡಿಪಿಒ ಉಷಾ ಅವರಿಂದ ತಿಳಿದುಕೊಂಡ ಡಿಸಿ ನಕುಲ್ ಅವರು ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ಬೇಕಿದ್ದರೇ ಮುತುವಜರ್ಿ ವಹಿಸಬೇಕು. ಸೈಟ್ ಸಮಸ್ಯೆ ಇದ್ದರೇ ಜಿಪಂ ಸಿಇಒ ಅವರನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಿ ಎಂದರು. ಕಟ್ಟಡ ಮತ್ತು ನಿವೇಶನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಂಗನವಾಡಿವಾರು ಒಂದು ಫಾಮರ್ೆಟ್ ರೂಪದಲ್ಲಿ ನೀಡಿ ಎಂದು ಹೇಳಿದ ಅವರು ಐಸಿಡಿಎಸ್ಗೆ ಸಂಬಂಧಿಸಿದಂತೆ ಮುಂದಿನ ತಿಂಗಳು ಒಂದು ಸಭೆ ನಡೆಸಲಾಗುವುದು. ಅವಾಗ ಸಂಪೂರ್ಣ ಮಾಹಿತಿ ನೀಡಿ; ಅರೇಬರೇ ಮಾಹಿತಿ ನೀಡುವುದರ ಸರಿಯಾದ ಮಾಹಿತಿ ನೀಡಿದರೇ ನಮಗೂ ಸಮಸ್ಯೆ ಅರಿವಾಗಿ ಕ್ರಮವಹಿಸಲು ಅನಕೂಲವಾಗುತ್ತದೆ ಎಂದರು.

4426 ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ: 

ಜಿಲ್ಲೆಯಲ್ಲಿ 10708 ಮಾಜಿ           ದೇವದಾಸಿಯರಿದ್ದು, ಅದರಲ್ಲಿ 8618 ಜನರು 1500 ರೂ.ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. 556 ಜನರಿಗೆ ಸ್ವಯಂ ಉದ್ಯೋಗ ನಡೆಸಲು ಸಾಲ ನೀಡಲಾಗಿದೆ. ಅವರು ಹೈನುಗಾರಿಕೆ, ಕಿರಾಣಿ ಅಂಗಡಿ, ತರಕಾರಿ ಮಾರಾಟ ಸೇರಿದಂತೆ ಇನ್ನೀತರ ಸ್ವಯಂ ಉದ್ಯೋಗ ನಡೆಸುವುದರ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ ಎಂದು ದೇವದಾಸಿ ಪುನರ್ವಸತಿ ಕೇಂದ್ರದ ಅಧಿಕಾರಿ ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಈಶ್ವರ್, ಡಿಎಚ್ಒ ಶಿವರಾಜ ಹೆಡೆ, ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ, ಸಮಾಜಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಪ್ರತಿನಿಧಿಗಳು ಹಾಗೂ ವಿವಿಧ ತಾಲೂಕುಗಳ ಸಿಡಿಪಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.