ಸೊನ್ನ ಬ್ಯಾರೇಜ್ ಹಿ.ಭೀಮಾನದಿಯಿಂದ ಮುಳಗಡೆಯಾಗಲಿರುವ ರೈತರ ಭೂಮಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ
ವಿಜಯಪುರ 29: :ಸೊನ್ನ ಬ್ಯಾರೇಜ್ನ ಹಿನ್ನಿರಿನಿಂದ ಫಲವತ್ತಾದ ಜಮೀನಿನಲ್ಲಿ ನೀರು ನಿಂತು ಬೆಳೆ ಬೆಳೆಯಲಾಗದೇ ನಷ್ಟ ಅನುಭವಿಸುತ್ತಿದ್ದರು ರೈತರು ನ್ಯಾಯ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಬೈಯಾರ ಗ್ರಾಮ ವಿಕಾಸ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಾದ ಟಿ ಬೂ ಭಾಲನ ಅವರಿಗೆ ಮನವಿ ಸಲ್ಲಿಸಿದರು.
ಇಂಡಿತಾಲೂಕಿನ ಭೀಮಾ ನದಿಗೆ ಸಂಬಂಧಿಸಿದಂತೆ ಸೊನ್ನ ಬ್ಯಾರೇಜ್ ಪ್ರಾಜೆಕ್ಟ್ ಪ್ರಾರಂಭವಾಗುವುದಕ್ಕೂ ಮುಂಚೆ 2003ರಲ್ಲಿ 4(1) ಪ್ರಾಥಮಿಕ ಸಮೀಕ್ಷೆಯಲ್ಲಿ ಅನೇಕ ರೈತರ ಜಮೀನುಗಳ ಸರ್ವೇ ಮಾಡಿ, ಅದರಲ್ಲಿ ಹಲವಾರು ರೈತರ ಜಮೀನುಗಳನ್ನು ಸೇರಿಸಲಾಗಿತ್ತು, ಅವರ ಭೂಮಿ ಜಲಾವೃತವಾಗಲಿರುವಂತೆ ಗುರುತಿಸಲಾಯಿತು. ಆ ಸಮಯದಲ್ಲಿ ಸಮೀಕ್ಷಾಧಿಕಾರಿಗಳು ಸ್ಥಳದಲ್ಲಿ ಕಲ್ಲುಗಳನ್ನು ಹಾಕಿಹಳದಿಮತ್ತು ಕೆಂಪುಬಣ್ಣದ ಕಲ್ಲುಗಳ ಮೂಲಕ ಭೂಮಿಯ ಜಲಾವೃತ್ತಿಯ ಗಡಿ ಗುರುತಿಸಲಾಗಿತ್ತು2023ರಲ್ಲಿ - ಪುನಃ ಪರೀಶೀಲನಾ ಸಮೀಕ್ಷೆ (6(1) ಸಮೀಕ್ಷೆ) : ಮಾಡಿ ಬೂಯ್ಯಾರ, ಚಿಕ್ಕ ಮಣೂರ ಸೇರಿದಂತೆ ಕೆಲವೊಂದುರೈತರ ಹೆಸರನ್ನುತೆಗೆದು ಹಾಕಲಾಯಿತು. ಈ ಅನ್ಯಾಯವನ್ನು ಸರಿಪಡಿಸಲು ಸ್ಥಾನಿಕ ಚೌಕಾಶಿ ಮಾಡಿಸೊನ್ನ ಬ್ಯಾರೇಜ್ನ ಹೀನ್ನಿರಿ ನಿಂದಯಾವ ರೈತರ ಜಮೀನುಗಳಲ್ಲಿ ನೀರು ನಿಂತು ನಷ್ಟ ಉಂಟಾಗಲಿವೆ, ಎಂದು ಕಂದಾಯ ಇಲಾಖೆ , ಸೇರಿದಂತೆ ಸಂಬಂಧಿಸಿದಂತೆ ಇತರೆ ಇಲಾಖೆಗಳ ಜಂಟಿ ಸಮೀಕ್ಷೆ ಮಾಡಿ ಕೂಡಲೇ ಅಂತಹ ರೈತರಿಗೆ ನ್ಯಾಯ ವದಗಿಸಿ ಕೊಡಬೇಕೆಂದು ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡಿದರು.
ಗ್ರಾಮ ವಿಕಾಸ ರೈತ ಸಂಘದ ಅಧ್ಯಕ್ಷರಾದ ಗಂಗಾಧರ ತಳವಾರ ಮಾತನಾಡುತ್ತಾ ನಿಜವಾದ ಫಲಾನುಭವಿಗಳಿಗೆ ನ್ಯಾಯ ಸಿಗಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿ, ಇತ್ತಿಚೆಗೆರಾಜ್ಯ ಸರ್ಕಾರವು 16 ಕ್ಕೂ ಅಧಿಕಎಕರೆ ಭೂಮಿಗೆ ಸಂಬಂಧಿಸಿದಂತೆ ?2.85 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ. ಆದರೆ, ಹೆಸರು ತಪ್ಪಿಹೋದ ಈ ಸುಮಾರುರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ, ಇವರಿಗೆ ನ್ಯಾಯ ಸಿಗಬೇಕು ಎಂದರು.ಹಿರಿಯರೈತ ಮುಖಂಡರಾದ ಬಾಬುಸಾಹೇಬ್ ಪಾಟೀಲ, ಬಾಬು ಚಿಕ್ಕಮಣೂರ, ಶಂಕರ ಚಿಕ್ಕಮಣೂರ ಮಾತನಾಡುತ್ತಾ ಸೊನ್ನ ಹಿನ್ನಿರಿನಿಂದ ನಷ್ಟವಾಗದೇ ಇರುವ ಪ್ರಭಾವಿ ರೈತರಿಗೆ ಪರಿಹಾರ ಬಂದಿದೆ, ನಿಜವಾಗಿ ನಷ್ಟಗೊಂಡ ರೈತರಿಗೆ ಪರಿಹಾರದಿಂದ ವಂಚಿತರಾಗಿದ್ದಾರೆ, ಕೂಡಲೇ ನೈಜರೈತರಿಗೂ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು ಸಮಿತಿರ ಚಿಸಬೇಕಾಗಿ ವಿನಂತಿ.ಈ ವೇಳೆ ಗಂಗಾಧರ ತಳವಾರ, ಪ್ರಭುಲಿಂಗ ಗೋಳಸಾರ, ಶ್ರೀನಾಥ ಹೊಸಮನಿ, ಮಲಕಯ್ಯ ಗ ಮಠ, ಶಾಂತಯ್ಯ ಗ ಮಠ, ಜಯಶ್ರೀ ಪಂಡಿತರಾಠೋಡ, ವೈಭವರಾ ಪಾಟೀಲ, ರಮೇಶ ಭೀ ನಾಟೀಕಾರ, ಭೀಮನಗೌಡ ಪಾಟೀಲ,ಆನಂದ ಶ ಚಿಕ್ಕ ಮಣೂರ, ಚಿದಾನಂದ ಕ ಚಿಕ್ಕ ಮಣೂರ, ಕಲ್ಲಪ್ಪಾ ಮ ಚಿಕ್ಕ ಮಣೂರ, ಸಂಗಮನಾಥ ಶ ಚಿಕ್ಕಮಣೂರ, ಬಸವರಾಜ ಶ ಚಿಕ್ಕಮಣೂರ, ಬಾಬು ಅ ಚಿಕ್ಕಮಣೂರ, ಸಿದ್ದು ಅ ಚಿಕ್ಕಮಣೂರ ಸೇರಿದಂತೆ ಅನೇಕರು ಇದ್ದರು.