ಬಳ್ಳಾರಿ 29: ನಗರದಲ್ಲಿ ಅಂದಾಜು 1200 ಕೋಟಿ ರೂ.ಗಳ ವೆಚ್ಚದಲ್ಲಿ ಬಳ್ಳಾರಿ ನಗರಕ್ಕೆ ಶಾಶ್ವತಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ರೆಡ್ಡಿ ಹೇಳಿದರು.ಗುರುವಾರ ಬೆಳಿಗ್ಗೆ ಸಲಾಂ ಬಳ್ಳಾರಿ ಅಭಿಯಾನ’ದ ಭಾಗವಾಗಿ ನಗರದ 12ನೇ ವಾರ್ಡಿಗೆ ಭೇಟಿ ನೀಡಿದಾಗ ಬ್ಯಾಗೇರ್ ವೃತ್ತದ ಸಮೀಪ ಮಾಧ್ಯಮದವರೊಂದಿಗೆ ಮಾತನಾಡಿದರು.ನಗರದ ಗಡಿಗಿಚೆನ್ನಪ್ಪ ವೃತ್ತದ ಲೋಕಾರೆ್ಣ ಹಾಗೂ 1200 ಕೋಟಿ ರೂ.ಗಳ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಗರಕ್ಕೆ ಆಗಮಿಸಲಿದ್ದು, ಕೆಲ ದಿನಗಳಲ್ಲಿ ಕಾರ್ಯಕ್ರಮ ಏರಿ್ಡಸಲಾಗುವುದು ಎಂದರು. ಈಗಾಗಲೇ ಭೇಟಿ ನೀಡಲಾಗಿರುವ ವಾರ್ಡಗಳಲ್ಲಿನ ಸ್ಥಳೀಯರ ಬೇಡಿಕೆ, ಅಹವಾಲು ಆಧರಿಸಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಬೇಸಿಗೆಯ ಹಿನ್ನೆಲೆಯಲ್ಲಿ ಅಭಿಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು ಎಂದರು.
ನಾಗೇಂದ್ರರಿಗೇ ಸಚಿವ ಸ್ಥಾನ: ಬಳ್ಳಾರಿ ಜಿಲ್ಲೆಯಿಂದ ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರಅವರಿಗೇ ಸಚಿವ ಸ್ಥಾನ ನೀಡಬೇಕೆಂದು ನಾವು ರಾಜ್ಯ, ರಾಷ್ಟ್ರೀಯ ಹೈಕಮಾಂಡಿಗೆ ಮನವಿ ಮಾಡಿದ್ದೇವೆ, ಅವರೇ ಸಚಿವರಾಗಬೇಕೆಂಬುದು ನನ್ನ ಒತ್ತಾಯ ಎಂದು ಶಾಸಕ ನಾರಾ ಭರತ್ರೆಡ್ಡಿ ಹೇಳಿದರು. ಕೆಲವರ ಕುತಂತ್ರದಿಂದಾಗಿ ನಾಗೇಂದ್ರ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ, ಅವರಿಗೆ ಅನ್ಯಾಯ ಆಗಿದೆ, ಸಂಪುಟ ವಿಸ್ತರಣೆ ವೇಳೆ ಅವರಿಗೆ ಅವಕಾಶ ನೀಡಬೇಕು, ಜಮಿರ್ ಅಹ್ಮದ್ ಅವರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದ್ದು, ನಮ್ಮ ಜಿಲ್ಲೆಯ ಶಾಸಕ ಬಿ.ನಾಗೇಂದ್ರ ಅವರಿಗೆ ಅವಕಾಶ ನೀಡಿದಲ್ಲಿ ಅಭಿವೃದ್ಧಿ ಸುಸೂತ್ರವಾಗಿ ಆಗಲಿ ಎಂದರು. ವಾರ್ಡಿನಾದ್ಯಂತ ಸಂಚರಿಸಿ ಜನರ ಅಹವಾಲು ಸ್ವೀಕರಿಸಿದರು. ಹಲವು ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯಿತು. ಮಹಾನಗರ ಪಾಲಿಕೆಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಜನರ ಸಮಸ್ಯೆಗಳನ್ನು ನಿವಾರಿಸಲಾಯಿತು. ವಾರ್ಡಿನ ಮುಖಂಡರಾದ ಸೋಮಪ್ಪ, ಮಡಿವಾಳಪ್ಪ, ಲೋಕೇಶ್, ಡೋಣೆಪ್ಪ, ನಟರಾಜ, ಮಹೇಶ, ಸಿಲಾರ್, ಅನಿಲ್, ಸುನಿಲ್, ರವಿ, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಅಬ್ದುಲ್ ಬಾರಿ, ಸುಬ್ಬರಾಯುಡು, ಚಂಪಾ ಚವ್ಹಾಣ್, ಕುಡಿತಿನಿ ರಾಮಾಂಜನೇಯ, ಭರತ್, ಥಿಯೇಟರ್ ಶಿವು ಬಸವರಾಜ, ನಾಗರಾಜ್, ರಂಜಿತಾ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇತರರು ಹಾಜರಿದ್ದರು.