ರಾಯಬಾಗ 29: ತಾಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಗಾಯರಾಣ ಜಮೀನದಲ್ಲಿ ಹಠವಾದಿ ಲೋಕೇಶ್ವರ ಸ್ವಾಮಿ ಎನ್ನುವ ವ್ಯಕ್ತಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಗುರುವಾರ ಮುಂಜಾನೆ ತಹಶೀಲ್ದಾರ ಸುರೇಶ ಮುಂಜೆ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತದೊಂದಿಗೆ ಸಂಪೂರ್ಣವಾಗಿ ತೆರವುಗೊಳಿಸಲಾಯಿತು.
ಮೇಖಳಿ ಗ್ರಾಮದ ಗಾಯರಾಣ ರಿ.ಸ.ನಂ.225 ರ ಒಟ್ಟು 21 ಎಕರೆ 23 ಗುಂಟೆ ಪೈಕಿ 8 ಎಕರೆಯಲ್ಲಿ ಅತಿಕ್ರಮವಾಗಿ ಕಾಮಿ ಸ್ವಾಮಿ ಲೋಕೇಶ್ವರ ನಿರ್ಮಿಸಿದ್ದ ಮಠ ಮತ್ತು ಅನ್ನದಾಸೋಹ ಭವನವನ್ನು ಮುಂಜಾನೆ ಜೆಸಿಬಿ ಮೂಲಕ ನಿಯಮಾನುಸಾರ ತೆರವು ಕಾರ್ಯಾಚಣೆ ಮಾಡಿ, ಜಮೀನವನ್ನು ಇಲಾಖೆ ಸುಪರ್ದಿಗೆ ಪಡೆಯಲಾಗಿದೆ. ಸರ್ಕಾರ ಅನುದಾನ ನೀಡಿದ ನಂತರ ಗಾಯರಾಣ ಜಮೀನಿಗೆ ತಂತಿ ಬೇಲಿ ಹಾಕಲಾಗುವುದು ಎಂದು ತಹಶೀಲ್ದಾರ ಮುಂಜೆ ತಿಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ಸಿಪಿಐ ಬಿ.ಎಸ್.ಮಂಟೂರ, ಕಂದಾಯ ನೀರೀಕ್ಷಕ ಸೋಮಶೇಖರ ಜೋರೆ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.